ತಿಂಗಳಲ್ಲಿ ಡೀಮ್ಡ್ ಅರಣ್ಯ ರದ್ದು

ನ್ನೊಂದು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಡೀಮ್ಡ್ ಅರಣ್ಯ ಎನ್ನುವುದನ್ನೇ ರದ್ದುಗೊಳಿಸಲಾಗುವುದು ಕಾನೂನು ಸಚಿವ ಟಿ.ಬಿ.ಜಯಚಂದ್ರ ...
ಟಿ.ಬಿ.ಜಯಚಂದ್ರ
ಟಿ.ಬಿ.ಜಯಚಂದ್ರ
Updated on
ವಿಧಾನಸಭೆ: ಇನ್ನೊಂದು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಡೀಮ್ಡ್ ಅರಣ್ಯ ಎನ್ನುವುದನ್ನೇ ರದ್ದುಗೊಳಿಸಲಾಗುವುದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ. 
ರಾಜ್ಯದಲ್ಲಿ ಸಿ ಮತ್ತು ಡಿ ಅರಣ್ಯ ಹೆಸರಿನಲ್ಲಿರುವ ಕಂದಾಯ ಜಾಗವನ್ನು ಸಕ್ರಮಗೊಳಿಸಲು ಆಗುತ್ತಿಲ್ಲ ಎಂದು ಬಿಜೆಪಿಯ ಬೋಪಯ್ಯ ಸರ್ಕಾರದ ಗಮನ ಸಳೆದರು. ಅದಕ್ಕೆ ಪ್ರತಿಕ್ರಿಸಿಯಿಸಿದ ಸಚಿವ ಜಯಚಂದ್ರ, ರಾಜ್ಯದಲ್ಲಿ ಸಿ ಮತ್ತು ಡಿ ಅರಣ್ಯ ಮತ್ತು ಡೀಮï್ಡ ಅರಣ್ಯಎನ್ನುವ ವಿಚಾರವಾಗಿ ಗೊಂದಲವಿದೆ. ಆದ್ದರಿಂದ  ಸದ್ಯದಲ್ಲೇ ಡೀಮï್ಡ ಅರಣ್ಯ ಎನ್ನುವುದನ್ನೇ ರದ್ದುಗೊಳಿಸಲಾಗುತ್ತದೆ. 
ಕಳೆದ 1972ರಲ್ಲಿ ಎಲ್ಲೆಡೆ ಗಿಡ ನೆಡುವ ಮೂಲಕ ಸಾಮಾಜಿಕ ಅರಣ್ಯ ಹೆಚ್ಚಿಸಬೇಕೆಂದು ಹೇಳಲಾಗಿತ್ತು. ಇತ್ತೀ ಚಿಗೆ ಸುಪ್ರೀಂಕೋರ್ಟ್ ಆದೇಶ ದಂತೆ ದಟ್ಟ ಮರಗಳಿರುವ ಜಾಗವನ್ನೆಲ್ಲಾ ಸೇರಿಸಿ ಡೀಮ್ಡ್ ಅರಣ್ಯ ಎಂದು ಮಾಡಲಾಗಿದೆ. ಆದ್ದರಿಂದ ಈಗ ಹೊಸದಾಗಿ ಸಮೀಕ್ಷೆ ನಡೆಸಿ ನೈಜ ಅರಣ್ಯ ಗುರುತಿಸಲಾಗಿದ್ದು ಸದ್ಯದಲ್ಲೇ ಡೀಮ್ಡ್ ಅರಣ್ಯ ರದ್ದುಗೊಳಿಸಲಾಗುವುದು ಎಂದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com