ರಾಜ್ಯದಲ್ಲಿ ಸುಮಾರು 60ಲಕ್ಷ ಜಾಬ್ ಕಾರ್ಡ್ದಾರರಿದ್ದಾರೆ. ಅವರೆಲ್ಲರನ್ನು ಬಳಸಿಕೊಂಡು ಇಷ್ಟೊತ್ತಿಗೆಗಾಗಲೇ ರು.12,000 ಕೋಟಿಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿತ್ತು. ಆದರೆ, ಈತನಕ ರು.3000ಕೋಟಿಗಳನ್ನು ಮಾತ್ರ ವೆಚ್ಚ ಮಾಡಲಾಗಿದೆ. ನಿಜಕ್ಕೂ ರಾಜ್ಯದಲ್ಲಿ ಉದ್ಯೋಗ ಖಾತ್ರಿ ಕಾರ್ಮಿಕರನ್ನು ಬಳಿಸಿಕೊಂಡರೆ, ಶ್ರಮಕ್ಕೆ ಬೆಲೆ ನೀಡಿದ್ದೇ ಆದರೆ ರಾಜ್ಯವನ್ನು ಬಂಗಾರ ಮಾಡಬಹುದು ಎಂದು ಕಾಗೋಡು ತಿಮ್ಮಪ್ಪ ವಿವರಿಸಿದರು. ನಂತರ ಶಾಸಕರಾದ ಶಿವಮೂರ್ತಿ, ಬಸವರಾಜ ಬೊಮಾ್ಮಯಿ, ಚಲುರಾಯಸ್ವಾಮಿ ಚರ್ಚೆಯಲ್ಲಿ ಪಾಲ್ಗೊಂಡು ಹಲವುಸಲಹೆ ನೀಡಿದರು.