ಸಿದ್ಧರಾಮಯ್ಯ ಕರ್ನಾಟಕದ ಲಾಲೂ: ಆರೆಸ್ಸೆಸ್ ಮುಖವಾಣಿ

ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ಟಿಪ್ಪು ಜಯಂತಿ ಆಚರಿಸಿರುವ ಕರ್ನಾಟಕ ಸರ್ಕಾರವನ್ನು ಟೀಕಿಸಿದ ಆರೆಸ್ಸೆಸ್, ಟಿಪ್ಪು ದಕ್ಷಿಣ ಭಾರತದ...
ಸಿದ್ಧರಾಮಯ್ಯ -ಟಿಪ್ಪು
ಸಿದ್ಧರಾಮಯ್ಯ -ಟಿಪ್ಪು
ನವದೆಹಲಿ: ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ಟಿಪ್ಪು ಜಯಂತಿ ಆಚರಿಸಿರುವ ಕರ್ನಾಟಕ ಸರ್ಕಾರವನ್ನು ಟೀಕಿಸಿದ ಆರೆಸ್ಸೆಸ್, ಟಿಪ್ಪು ದಕ್ಷಿಣ ಭಾರತದ ಔರಂಗಜೇಬ್ ಎಂದು ತಮ್ಮ ಮುಖವಾಣಿ ಪಾಂಚಜನ್ಯದಲ್ಲಿ ಹೇಳಿದೆ. 
ಮೈಸೂರು ಅರಮನೆಯ ದಿವಾನರಾಗಿದ್ದ ಮೌಲಾನಾ ಅಬ್ಧುಲ್ ಕಲಾಂ ಅಜಾದ್ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರ ಜಯಂತಿಯನ್ನು ಆಚರಿಸುವ ಬದಲು ವಿವಾದವೆಬ್ಬಿಸಿ ಟಿಪ್ಪು ಜಯಂತಿಯನ್ನು ಆಚರಿಸುವ ಅಗತ್ಯವೇನಿತ್ತು ಎಂದು ಆರೆಸ್ಸೆಸ್ ಪ್ರಶ್ನಿಸಿದೆ.
ಟಿಪ್ಪು ವಿವಾದಿತ ವ್ಯಕ್ತಿ. ಆತನ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಕರ್ನಾಟಕ ಸರ್ಕಾರ ಮುಸ್ಲಿಂ ಮತಗಳನ್ನು ಗಳಿಸಲು ಯತ್ನಿಸುತ್ತಿದೆ. 
ಹಿಂದೂ ಸಂಘಟನೆಗಳು ಟಿಪ್ಪುವನ್ನು ಜಾತ್ಯಾತೀತ ಎಂದು ಹೇಳಿವುದಿಲ್ಲ. ಅವನೊಬ್ಬ ಅಹಿಷ್ಣುತೆ ಹೊಂದಿದ್ದ ನಾಯಕನಾಗಿದ್ದ.  ಅವನು ದಕ್ಷಿಣ ಭಾರತದ ಔರಂಗಜೇಬ್ ಆಗಿದ್ದು. ಆತ ಹಲವಾರು ಜನರನ್ನು ಬಲವಂತವಾಗಿ ಮತಾಂತರ ಮಾಡಿದ್ದು ದೇವಾಲಯಗಳ ಮೇಲೆ ದಾಳಿ ಮಾಡಿದ್ದ.
ಟಿಪ್ಪು ಜಯಂತಿಯನ್ನು ಸಿದ್ಧರಾಮಯ್ಯ ಸರ್ಕಾರ ಯಾಕೆ ಆಚರಿಸಿದೆ ಎಂಬುದು ಎಲ್ಲರಿಗೂ ಗೊತ್ತಿಗೆ. ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರನ್ನು ಓಲೈಸಿಕೊಂಡೇ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಪಟ್ಟಕ್ಕೇರಿದ್ದರು. 
ಸಿದ್ಧರಾಮಯ್ಯ ಅವರು ಮುಲಾಯಂ ಸಿಂಗ್ ಅಥವಾ ಲಾಲೂ ಪ್ರಸಾದ್ ಯಾದವ್   ಅವರ ಕರ್ನಾಟಕದ ಆವೃತ್ತಿ ಎಂದು ಪಾಂಚಜನ್ಯದಲ್ಲಿ ಹೇಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com