ಸಚಿವರ ರಾಜಿನಾಮೆ ಪಡೆಯದೆ ಭಂಡತನ ಪ್ರದರ್ಶನ: ಈಶ್ವರಪ್ಪ

ಸಮಾಜ ಕಲ್ಯಾಣ ಸಚಿವ ಆಂಜನೇಯ ಅವ್ಯವಹಾರ ಕುರಿತು ಸುವರ್ಣ ವಾಹಿನಿಯಲ್ಲಿ ಸುದ್ದಿ ಪ್ರಸಾರವಾಗಿದ್ದರೂ ಅವರ ರಾಜಿನಾಮೆ...
ಕೆಎಸ್ ಈಶ್ವರಪ್ಪ
ಕೆಎಸ್ ಈಶ್ವರಪ್ಪ

ಶಿವಮೊಗ್ಗ: ಸಮಾಜ ಕಲ್ಯಾಣ ಸಚಿವ ಆಂಜನೇಯ ಅವ್ಯವಹಾರ ಕುರಿತು ಸುವರ್ಣ ವಾಹಿನಿಯಲ್ಲಿ ಸುದ್ದಿ ಪ್ರಸಾರವಾಗಿದ್ದರೂ ಅವರ ರಾಜಿನಾಮೆ ಪಡೆಯದಿರುವುದು ಸರ್ಕಾರದ ಭಂಡತನ ತೋರಿಸುತ್ತದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ. 

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೆ ಕೆಲವು ಪ್ರಕರಣಗಳಲ್ಲಿ ಸಚಿವರ ಮೇಲೆ ಆಪಾದನೆ ಬಂದಾಗ ಅವರು ಅಧಿಕಾರದಿಂದ ಕೆಳಗಿಳಿದು ಆರೋಪದಿಂದ ಮುಕ್ತರಾದ ನಂತರ ಮತ್ತೆ ಸಚಿವರಾಗಿದ್ದಾರೆ. 
ಆಂಜನೇಯ ಮೇಲೆ ನೇರ ಆಪಾದನೆ ಇದ್ದರೂ ಸರ್ಕಾರ ಏನೂ ಮಾಡುತ್ತಿಲ್ಲ. ಇದೇನೂ ಮೊದಲಲ್ಲ. ಈ ಹಿಂದೆ ಹಾಸಿಗೆ-ದಿಂಬು ಅವ್ಯವಹಾರವನ್ನೂ ನಾವು ಬಯಲಿಗೆ ತಂದಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com