ಅಪ್ಪ, ಮಕ್ಕಳ ಪಕ್ಷವಲ್ಲ: ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ನಮ್ಮದು ಅಪ್ಪ, ಮಕ್ಕಳ ಪಕ್ಷವಲ್ಲ. ನಮ್ಮ ಶಕ್ತಿ, ಯುಕ್ತಿಯನ್ನುನಿಮಗೇ ನೀಡುತ್ತೇವೆ. ನೀವೇ ಜವಾಬ್ದಾರಿ ಹೊತ್ತುಕೊಳ್ಳಿ. ಒಟ್ಟಿನಲ್ಲಿ ಪಕ್ಷವನ್ನು ಉಳಿಸಿ ಬೆಳೆಸಿ ಎಂದರು. ಮಾಜಿ ಸಚಿವರಾದ ಅಲ್ಕೋಡ್ ಹನುಮಂತಪ್ಪ, ಚಲುವರಾಯಸ್ವಾಮಿ, ಎಚ್.ಡಿ.ರೇವಣ್ಣ, ಪಕ್ಷದ ರಾಷ್ಟ್ರೀಯ ಪಧಾನ ಕಾರ್ಯದರ್ಶಿ ಜಪ್ರುಲ್ಲಾ, ಬಂಡೆಪ್ಪ ಕಾಶಂಪೂರ್, ಗೋಪಾಲಯ್ಯ, ಉಪ ಮೇಯರ್ ಹೇಮಲತಾ ಭಾಗವಹಿಸಿದ್ದರು.