ಮೋದಿ ಪ್ರಶಂಸೆಗೆ ಧನ್ಯವಾದ ತಿಳಿಸಿದ ಮುಲಾಯಂ

ಸಂಸತ್ ಅಧಿವೇಶನದ ವೇಳೆ ಗದ್ದಲ ಉಂಟುಮಾಡಿದ್ದ ಕಾಂಗ್ರೆಸ್ ಗೆ ಬೆಂಬಲಿಸದ ಸಮಾಜವಾದಿ ಪಕ್ಷದ ಕ್ರಮಕ್ಕೆ ಪ್ರಧಾನಿ ಮೋದಿಯಿಂದ ವ್ಯಕ್ತವಾದ ಪ್ರಶಂಸೆಯನ್ನು ಮುಲಾಯಂ ಸಿಂಗ್ ಸ್ವಾಗತಿಸಿದ್ದಾರೆ.
ಮುಲಾಯಂ ಸಿಂಗ್
ಮುಲಾಯಂ ಸಿಂಗ್
Updated on

ಲಖನೌ: ಸಂಸತ್ ಅಧಿವೇಶನದ ವೇಳೆ ಗದ್ದಲ ಉಂಟುಮಾಡಿದ್ದ ಕಾಂಗ್ರೆಸ್ ಗೆ ಬೆಂಬಲಿಸದ ಸಮಾಜವಾದಿ ಪಕ್ಷದ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ ವ್ಯಕ್ತವಾದ ಪ್ರಶಂಸೆಯನ್ನು ಮುಲಾಯಂ ಸಿಂಗ್ ಸ್ವಾಗತಿಸಿದ್ದಾರೆ.

ಪ್ರಧಾನಿ ಮೋದಿ ಪ್ರಶಂಸೆ ವ್ಯಕ್ತಪಡಿಸಿರುವುದು ಗೌರವ ಸೂಚಕ ಎಂದು ಭಾವಿಸುತ್ತೇನೆ. ಆದರೆ ಏರು ಧ್ವನಿಯಲ್ಲಿ ಸುಳ್ಳು ಹೇಳಿ ಜನತೆಗೆ ಮೋಸ ಮಾಡುತ್ತಿರುವುದು ಸರಿಯಲ್ಲ ಎಂದು ಮುಲಾಯಂ ಸಿಂಗ್ ಯಾದವ್ ಮೋದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮುಲಾಯಂ ಸಿಂಗ್ ಯಾದವ್, ಪ್ರಜಾಪ್ರಭುತ್ವವವನ್ನು ಉಳಿಸಲು ಸಮಾಜವಾದಿ ಪಕ್ಷ ಬೆಂಬಲಿಸಿದ್ದಕ್ಕೆ ಮೋದಿ ಪ್ರಶಂಸಿಸಿದ್ದಾರೆ. ಆದರೆ ಮೋದಿ ಸುಳ್ಳು ಹೇಳಿದರೂ ಸಹಿಸುತ್ತೇವೆ ಎಂದು ಇದರ ಅರ್ಥವಲ್ಲ. ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ಮೋದಿ ಕಪ್ಪು ಹಣ ವಾಪಸ್ ತಂದು ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂಪಾಯಿ ಜಮಾ ಮಾಡುವುದಾಗಿ ಭರವಸೆ ನೀಡಿದ್ದರು. ಈ ವರೆಗೂ ಅದನ್ನು ಈಡೇರಿಸಿಲ್ಲ. ಜನರು ತಮ್ಮ ಅಭಿವೃದ್ಧಿ ಬಗ್ಗೆ ಯೋಚಿಸದ ಜನಪ್ರತಿನಿಧಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಮುಲಾಯಂ ಸಿಂಗ್ ಕರೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com