ಬೆಂಗಳೂರು: ಅಂತರ್ಜಲಗಳು ಬತ್ತುಹೋಗುತ್ತಿರುವುದೇ ಭೀಕರ ಬರಗಾಲಕ್ಕೆ ಕಾರಣ ಎಂದು ಬಿಜೆಪಿ ಶಾಸಕ ಸಿ ಟಿ ರವಿ ಹೇಳಿದ್ದಾರೆ.
ಬರ ಪ್ರವಾಸ ಕೈಗೊಂಡಿರುವ ಬಿಜೆಪಿ ಶಾಸಕ ಸಿ ಟಿ ರವಿ, ಅಂತರ್ಜಲಗಳು ಬತ್ತುಹೋಗುತ್ತಿದ್ದು, ಭೂಮಿ ಒಣಗಿ ಹೋಗಿದೆ. ಹಾಗಾಗಿ, ಅಂತರ್ಜಲವನ್ನು ರಾಜ್ಯದ ಆಸ್ತಿ ಎಂದು ಸರ್ಕಾರ ಪರಿಗಣಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಕಳೆದ ಕೆಲವು ವಾರಗಳಿಂದ ರಾಜ್ಯ ಬಿಜೆಪಿ ನಾಯಕರು ಕೂಡ ಎಂಟು ತಂಡಗಳಲ್ಲಿ ಬರ ಅಧ್ಯಯನ ಪ್ರವಾಸ ಮಾಡುತ್ತಿದ್ದು, ಮೇ 3ರಂದು ರಾಜ್ಯಪಾಲರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಲಿದೆ ಎಂದು ತಿಳಿಸಿದ್ದಾರೆ.