ಬೆಂಗಳೂರು: ಮಹಾತ್ಮ ಗಾಂಧಿ ಹತ್ಯೆಯಾದ ದಿನ ಆರ್ ಎಸ್ ಎಸ್ ಸಿಹಿ ಹಂಚಿತ್ತು, ನಾಥೂರಾಮ್ ಗೂಡ್ಸೆ ಆರ್ ಎಸ್ ಎಸ್ ಸದಸ್ಯ ಎಂದು ಪ್ರಪಂಚಕ್ಕೆ ಗೊತ್ತಿರುವ ಸತ್ಯ ಎಂದು ಕಾಂಗ್ರೆಸ್ ಮುಖಂಡ ರಿಜ್ವಾನ್ ಅರ್ಷದ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಕ್ತಪಾತ ಬಯಸುವುದು ಆರ್ ಎಸ್ ಎಸ್ ತತ್ವ ಸಿದ್ದಾಂತ ಎಂದು ಅವರು ಟೀಕಿಸಿದರು.
ಇನ್ನು ಕಾಂಗ್ರೆಸ್ ಆರೋಪಕಕ್ಕ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಸುದೇಶ್ ಶರ್ಮಾ, 1984 ರ ಸಿಖ್ ಸಮುದಾಯದ ಸಾಮೂಹಿಕ ಮಾರಣ ಹೋಮಕ್ಕೆ ಕಾಂಗ್ರೆಸ್ ಕಾರಣ ಎಂದು ದೂರಿದ್ದಾರೆ.
ಮಹಾತ್ಮ ಗಾಂಧಿ ಹತ್ಯೆ ಮಾಡಿದ್ದು ಆರ್ ಎಸ್ ಎಸ್ ಎಂದು ತಾವು ನೀಡಿದ್ದ ಹೇಳಿಕೆಗೆ ಬದ್ದ ಎಂದು ರಾಹುಲ್ ಗಾಂಧಿ ತಿಳಿಸಿದ್ದರು.
Advertisement