ವಾಚ್ ಗಿಫ್ಟ್ ನೀಡಿದ್ದು ಯಾರು ಎಂಬುದನ್ನು ಬಹಿರಂಗ ಪಡಿಸಲಿ: ವಾಚ್ ವಾರ್ ನಂತರ 'ಕಾರ್ ವಾರ್'

ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವಿನ ವಾಕ್ಸಮರ ಇದೀಗ ಮತ್ತೊಂದು ಘಟ್ಟ ತಲುಪಿದೆ. ...
ಎಚ್.ಡಿ ಕುಮಾರ ಸ್ವಾಮಿ ಮತ್ತು ಸಿದ್ದರಾಮಯ್ಯ
ಎಚ್.ಡಿ ಕುಮಾರ ಸ್ವಾಮಿ ಮತ್ತು ಸಿದ್ದರಾಮಯ್ಯ

ಬೆಂಗಳೂರು: ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ  ನಡುವಿನ ವಾಕ್ಸಮರ  ಇದೀಗ ಮತ್ತೊಂದು ಘಟ್ಟ ತಲುಪಿದೆ.

ಸಿದ್ದರಾಮಯ್ಯ ವಾಚ್ ಬಗ್ಗೆ ಪ್ರಶ್ನೆ ಎತ್ತಿದ್ದ ಕುಮಾರಸ್ವಾಮಿ ಗೆಸಿಎಂ ತಮಗೆ ವಾಚ್ ಯಾರೋ ಗಿಫ್ಟ್ ನೀಡಿದ್ದು ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಇನ್ನು ವಾಚ್ ಗಿಫ್ಟ್ ನೀಡಿದ್ದು ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಚ್ ಡಿ ಕುಮಾರ ಸ್ವಾಮಿ, ಸಿಎಂ ಗೆ ವಾಚ್ ಅನ್ನು ಯಾರೋ ಉಡುಗೊರೆಯಾಗಿ ಕೊಟ್ಟಿದ್ದಾರೆ ಎನ್ನುವುದಾದರೇ ಆ ವಾಚನ್ನು ಯಾರು ಕೊಟ್ಟರು, ಏಕೆ ಕೊಟ್ಟರು ಎನ್ನುವುದನ್ನು ಸಿಎಂ ಬಹಿರಂಗ ಪಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.ಆದಾಯ ತೆರಿಗೆ ಇಲಾಖೆ ಪ್ರಕಾರ 20 ಸಾವಿರ ರುಪಾಯಿಗಿಂತ ಹೆಚ್ಚಿನ ಮೌಲ್ಯದ ಉಡುಗೊರೆ ಸ್ವೀಕರಿಸಿದ್ದರೇ ಅದರ ಲೆಕ್ಕ ಕೊಡಬೇಕು ಎಂದು ಕುಮಾರ ಸ್ವಾಮಿ ಹೇಳಿದ್ದಾರೆ.

ಇನ್ನು ತಮ್ಮ ಪುತ್ರ ನಿಖಿಲ್ ಕುಮಾರ ಸ್ವಾಮಿ ದುಬಾರಿ ಕಾರ್ ಬಗ್ಗೆ ಪ್ರಶ್ನಿಸಿರುವ ಸಿಎಂ ಗೆ ಎಚ್ ಡಿಕೆ ಸಮರ್ಥನೆ ನೀಡಿದ್ದಾರೆ.  ತಮ್ಮ ಪುತ್ರ ಕಂಪನಿಯೊಂದರ ನಿರ್ದೇಶಕರಾಗಿದ್ದು, ದುಡಿದ ಹಣದಲ್ಲೇ ಕಾರ್ ತೆಗೆದುಕೊಂಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಇನ್ನು ಮಗನ ಸಿನಿಮಾಗೆ ನಾನು ಸಾಲ ಮಾಡಿ ದುಡ್ಡು ಹಾಕಿದ್ದೇನೆ. ನನ್ನ ಕುಟುಂಬದ ಬಗ್ಗೆ ಮಾತನಾಡಲಿಕ್ಕೆ ಸಿದ್ದರಾಮಯ್ಯ ಗೆ ನೈತಿಕತೆ ಇಲಲ್ಲ ಎಂದು ಎಚ್ ಡಿಕೆ ಗುಡುಗಿದ್ದಾರೆ, ಇಷ್ಟಕ್ಕೂ ಅವರ ಸೆಕೆಂಡ್ ಹ್ಯಾಂಡ್ ಖರೀದಿಸಲು ನಾನೇನು ಗುಜರಿ ಅಂಗಡಿ ಇಟ್ಟುಕೊಂಡಿಲ್ಲ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com