ಕೊಪ್ಪಳ ಜಿಪಂ, ತಾಪಂ ಅಭ್ಯರ್ಥಿಗಳ ಆಯ್ಕೆ ಪೂರ್ವಭಾವಿ ಸಭೆಗೆ ಆಗಮಿಸಿದ್ದ ದೇವೇಗೌಡ, ಉತ್ತರ ಕರ್ನಾಟಕದಲ್ಲಿ ಪಕ್ಷ ಬಿಟ್ಟು ಹೋದವರು ಸೋನಿಯಾ, ನಿತೀಶ್ ಕುಮಾರ್ರನ್ನು ಬೆಂಬಲಿಸಿದ ಉದಾಹರಣೆ ಇದೆ. ಅಂಥವರು ಇಂದು ಏನಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಇಕ್ಬಾಲ್ ಅನ್ಸಾರಿ ಅವರನ್ನು ನಾನೇ ರಾಜಕೀಯಕ್ಕೆ ಕರೆದುಕೊಂಡು ಬಂದೆ. ಈ ಮಟ್ಟದವರೆಗೆ ಬೆಳೆಸಿದೆ. ಅದನ್ನು ಅವರು ನೆನೆಸಿಕೊಳ್ಳಬೇಕು. ನಮ್ಮ ಪಕ್ಷದ ಕಾರ್ಯದರ್ಶಿ ಮಾಹಿತಿ ನೀಡಿದರೂ ಸಭೆಗೆ ಬಂದಿಲ್ಲ. ಅವರು ಬಾರಿದ್ದರೂ ಯಾವುದೇ ಹಾನಿಯಿಲ್ಲ. ಪಕ್ಷ ಉಳಿಸಲು ನಮ್ಮ ಕಾರ್ಯಕರ್ತರಿದ್ದಾರೆ. ಅನ್ಸಾರಿ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎನ್ನುವುದು ತಿಳಿದಿದೆ.