ರಾಜ್ಯದಲ್ಲಿ ಕಾಂಗ್ರೆಸ್ ಉಳಿಯಬೇಕು ಅದಕ್ಕಾಗಿ ಇಷ್ಟು ಕಠಿಣವಾಗಿ ಹೇಳುತ್ತಿದ್ದೇನೆ. ಪರಮೇಶ್ವರ್, ಖರ್ಗೆ, ಡಿಕೆಶಿ, ಎಚ್.ಕೆ.ಪಾಟೀಲ್, ಉಗ್ರಪ್ಪ ಮೊದಲಾದ ನಾನಾ ಸಮುದಾಯದ ಮುಖಂಡರಿದ್ದಾರೆ. ಜನರ ನೆನಪು ಕಡಿಮೆ ಇರಬಹುದು. ಆದರೆ ದಡ್ಡರಲ್ಲ. ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.