ಮಾರ್ಗರೇಟ್ ಆಳ್ವಾ ಹೇಳಿಕೆಗಳು ಸರಿಯಲ್ಲ: ದೇಶಪಾಂಡೆ

ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವಾ ತಮ್ಮ ಪುಸ್ತಕದಲ್ಲಿ ಬರೆದಿರುವುದೆಲ್ಲಾ ಅಪ್ರಸ್ತುತ ಎಂದು ಕೈಗಾರಿಕಾ ಸಚಿವ ಆರ್ . ದೇಶಪಾಂಡೆ ಹೇಳಿದ್ದಾರೆ. ...
ಮಾರ್ಗರೇಟ್ ಆಳ್ವ ಮತ್ತು ಆರ್.ವಿ ದೇಶಪಾಂಡೆ
ಮಾರ್ಗರೇಟ್ ಆಳ್ವ ಮತ್ತು ಆರ್.ವಿ ದೇಶಪಾಂಡೆ

ಬೆಂಗಳೂರು: ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವಾ ತಮ್ಮ ಪುಸ್ತಕದಲ್ಲಿ ಬರೆದಿರುವುದೆಲ್ಲಾ ಅಪ್ರಸ್ತುತ ಎಂದು ಕೈಗಾರಿಕಾ ಸಚಿವ ಆರ್ . ದೇಶಪಾಂಡೆ ಹೇಳಿದ್ದಾರೆ.

ಮಾರ್ಗರೆಟ್‌ ಆಳ್ವಾ ಅವರು ಇತ್ತೀಚೆಗೆ ಬಿಡುಗಡೆ ಮಾಡಿದ ‘ಕರೇಜ್‌ ಅಂಡ್‌ ಕಮಿಟ್‌ಮೆಂಟ್‌’ ಪುಸ್ತಕದಲ್ಲಿ ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಉತ್ತರ ನೀಡಿರುವ ದೇಶಪಾಂಡೆ, 2004 ರ ಲೋಕಸಭೆ ಚುನಾವಣೆ ವೇಳೆ ಆಳ್ವಾ ವಿರುದ್ಧ ನಾನು ಯಾವುದೇ ರೀತಿಯಲ್ಲಿ ಪಿತೂರಿ ಮಾಡಿಲ್ಲ, ಆಕೆ ನನ್ನ ಹಿರಿಯ ಅಕ್ಕ ಇದ್ದಂತೆ, ಅವರ ಆರೋಪಗಳನ್ನೆಲ್ಲಾ ನನಗೆ ಆಶೀರ್ವಾದ ಇದ್ದಂತೆ ಎಂದು ಹೇಳಿದ್ದಾರೆ.

ಮಾರ್ಗರೇಟ್ ಆಳ್ವ ಕೇವಲ ಒಂದು ಬಾರಿ ಮಾತ್ರ ಸಂಸದರಾಗಿ ಆಯ್ಕೆಯಾಗಿದ್ದಾರೆ. ನಾನು ಅವರ ಪರ ಕೆಲಸ ಮಾಡಿದ್ದರಿಂದ ಮಾತ್ರ ಅವರಿಗೆ ಗೆಲ್ಲಲು ಸಾಧ್ಯವಾಯಿತು ಎಂದು ದೇಶಪಾಂಡೆ ಹೇಳಿದ್ದಾರೆ.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಮ್ಮ ಮಗನಿಗೆ ಟಿಕೆಟ್ ಕೊಡಿಸುವ ಉದ್ದೇಶ ಹೊಂದಿದ್ದ ಆರ್ .ವಿ ದೇಶಪಾಂಡೆ 2004ರ ಲೋಕಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣರಾದರು ಎಂದು ಮಾರ್ಗರೇಟ್ ಆಳ್ವ ತಮ್ಮ ಪುಸ್ತಕದಲ್ಲಿ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com