ಸಂಪುಟ ಪುನಾರಚನೆ ಅಸಮಾಧಾನ: ಪುಟ್ಗೋಸಿ ಹೈ ಕಮಾಂಡ್, ಎಸ್ ಟಿ ಸೋಮಶೇಖರ್ ಕಿಡಿ

ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್. ಯಾವ ಹೈಕಮಾಂಡ್. ಪುಟ್ಗೋಸಿ ಹೈಕಮಾಂಡ್ ಎಂದು ಕಿಡಿಕಾರಿದ್ದಾರೆ...
ಎಸ್.ಟಿ ಸೋಮಶೇಖರ್
ಎಸ್.ಟಿ ಸೋಮಶೇಖರ್

ಬೆಂಗಳೂರು: ಸಂಪುಟ ಪುನಾರಚನೆ ಬೆನ್ನಲ್ಲೇ ಅಸಮಾಧಾನಗೊಂಡ ಶಾಸಕರು ಒಳಗೊಳಗೆ ಕುದಿಯುತ್ತಿದ್ದಾರೆ. ಕೆಲವರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಆಪ್ತರ ಬಳಗದಲ್ಲಿ ಗುರುತಿಸಿಕೊಂಡಿದ್ದ ಶಾಸಕ ಎಸ್,ಟಿ ಸೋಮಶೇಖರ್ ತಮಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಹೈ ಕಮಾಂಡ್ ವಿರುದ್ಧ ಗರಂ ಆಗಿದ್ದಾರೆ.

ಈ ಹಿಂದೆ ಮೊದಲ ಬಾರಿ ಶಾಸಕರಾದವರನ್ನು ಸಚಿವರನ್ನಾಗಿ ಮಾಡಲು ಆಗುವುದಿಲ್ಲ ಎಂದಿದ್ದರು. ಹಾಗಾದರೆ ಪ್ರಿಯಾಂಕ್ ಖರ್ಗೆ, ಪ್ರಮೋದ್ ಮಧ್ವರಾಜ್ ಗೆ ಹೇಗೆ ಮಂತ್ರಿಸ್ಥಾನ ಕೊಟ್ಟರು? ಎಂದು ಪ್ರಶ್ನಿಸಿರುವ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್. ಯಾವ ಹೈಕಮಾಂಡ್. ಪುಟ್ಗೋಸಿ ಹೈಕಮಾಂಡ್ ಎಂದು ಕಿಡಿಕಾರಿದ್ದಾರೆ.

ಖರ್ಗೆಯವರು ಮಗನಿಗಾಗಿ ಲಾಬಿ ಮಾಡಿದ್ದಾರೆ. ಮೊದಲ ಬಾರಿಗೆ ಆಯ್ಕೆಯಾದವರಿಗೆ ಮಂತ್ರಿಗಿರಿ ಇಲ್ಲ ಎಂದ ಮೇಲೆ ಪ್ರಿಯಾಂಕ್ ಖರ್ಗೆ, ಮಧ್ವರಾಜ್ ಗೂ ಸಿಗಬಾರದು. ನನ್ನ ಯಾಕೆ ಸಚಿವರನ್ನಾಗಿ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com