ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆಗೆ ಐಡಿಯಾ ಕೊಟ್ಟ ಭೂಪ ಯಾರು? ದತ್ತ ಪ್ರಶ್ನೆ

18 ವರ್ಷಗಳ ಹಿಂದಿನ ನ್ಯಾಯಾಲಯದ ಆದೇಶದ ಎಳೆ ಹಿಡಿದುಕೊಂಡು ಲೋಕಾಯುಕ್ತ ಮುಚ್ಚಿಹಾಕಲು ನಿಮಗೆ ಐಡಿಯಾ ಕೊಟ್ಟ ಭೂಪ ಯಾರು? ಲೋಕಾಯುಕ್ತ ...
ವೈ.ಎಸ್.ವಿ ದತ್ತ
ವೈ.ಎಸ್.ವಿ ದತ್ತ
Updated on

ಬೆಂಗಳೂರು: 18 ವರ್ಷಗಳ ಹಿಂದಿನ ನ್ಯಾಯಾಲಯದ ಆದೇಶದ ಎಳೆ ಹಿಡಿದುಕೊಂಡು ಲೋಕಾಯುಕ್ತ ಮುಚ್ಚಿಹಾಕಲು ನಿಮಗೆ ಐಡಿಯಾ ಕೊಟ್ಟ ಭೂಪ ಯಾರು? ಲೋಕಾಯುಕ್ತ ವ್ಯವಸ್ಥೆ ಕುರಿತು ದಿನಗಟ್ಟಲೇ ಚರ್ಚೆ ನಡೆದಾಗಲೂ ಪ್ರಸ್ತಾಪವಾಗದ ಈ ಆಲೋಚನೆ ದಿಢೀರ್ ಜಾರಿ ಹಿಂದೆ ಯಾವ ಸದುದ್ದೇಶವಿದೆ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ಶಾಸಕ ವೈಎಸ್​ವಿ ದತ್ತ ಪ್ರಶ್ನಿಸಿದ್ದಾರೆ.

ಈ ಸಂಸ್ಥೆ ಬಗ್ಗೆ ಸದಾ ವಿರುದ್ದವಾಗಿರುವ ಅಧಿಕಾರಶಾಹಿ ತೊಡಕಿನ ಮಧ್ಯೆಯೂ ರಾಮಕೃಷ್ಣ ಹೆಗಡೆ ಕಾಲದಲ್ಲಿ ಸಂಸ್ಥೆ ಜೀವ ತಳೆಯಿತು. ಆ ಸಂದರ್ಭದ ಸರ್ಕಾರದಲ್ಲಿ ನೀವೂ ಇದ್ದಿರಿ. ಲೋಹಿಯಾ ವಾದಿಗಳಾದ ನೀವು ಶಕ್ತಿ ಇದ್ದರೆ ಸುಧಾರಣೆ ಚಕ್ರವನ್ನು ಮುಂದೆಳೆಯಬೇಕು ಎಂದು ಕಿವಿಮಾತು ಹೇಳಿದರು.

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಸಹಕಾರಕ್ಕೆ ಬೇಸತ್ತು ನ್ಯಾ.ಸಂತೋಷ್ ಹೆಗ್ಡೆ ರಾಜೀನಾಮೆ ನೀಡಿದ್ದ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಆಡಿದ್ದ ಮಾತುಗಳನ್ನು ಪುನರುಚ್ಚರಿಸಿದ ದತ್ತ, ಈಗ ಸಿಎಂ ಆಗಿ ಎಸಿಬಿ ರಚನೆ ಮಾಡಿರುವುದು ನಿಜಕ್ಕೂ ಗೌರವ ತರುವುದಿಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com