ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ರೋಷನ್ ಬೇಗ್ ಅವರ ಪಾತ್ರ ಇದೆ ಎಂದು ಆರೋಪಿಸಿದ್ದಾರಲ್ಲಾ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ, ಜವಾಬ್ದಾರಿಯುತ ಸ್ಥಾನದಲ್ಲಿರುವ ಶೋಭಾ ಅವರು ಇಂತಹ ಗಂಭೀರ ಆರೋಪ ಮಾಡುವ ಮೊದಲು ಬಹುಶಃ ಎಲ್ಲವನ್ನೂ ಪರಿಶೀಲಿಸಿ ಮಾತನಾಡಿದ್ದಾರೆ ಎಂದುಕೊಂಡಿದ್ದೇನೆ. ಆದರೆ, ರುದ್ರೇಶ್ ಕೊಲೆಯಲ್ಲಿ ರೋಷನ್ ಬೇಗ್ ಅವರ ಪಾತ್ರವಿಲ್ಲ ಎಂಬುದು ನಮ್ಮ ಇಲಾಖೆಯಿಂದ ಇರುವ ಸದ್ಯದ ಮಾಹಿತಿ. ಹಾಗಾಗಿ ಶೋಭಾ ಕರಂದ್ಲಾಜೆ ಅವರು ತಾವು ಮಾಡಿರುವ ಆರೋಪವನ್ನು ತಾವೇ ಸಾಬೀತುಪಡಿಸಬೇಕು. ತಮ್ಮ ಬಳಿ ಏನೆಲ್ಲಾ ಮಾಹಿತಿಗಳಿವೆಯೋ ಅವೆಲ್ಲವನ್ನೂ ಪೊಲೀಸ್ ಇಲಾಖೆಗೆ ನೀಡಬೇಕು. ಇಲ್ಲದಿದ್ದರೆ ಅವರೇ ತಪ್ಪಿತಸ್ಥರಾಗುತ್ತಾರೆ ಎಂದರು.