ಭೂ ಕಬಳಿಕೆ ಆರೋಪ, ನನ್ನ ವಿರುದ್ಧ ಬಿಜೆಪಿ-ಕಾಂಗ್ರೆಸ್ ಷಡ್ಯಂತ್ರ: ಕುಮಾರಸ್ವಾಮಿ

ಭೂ ಕಬಳಿಕೆ ಮಾಡಿ ಬಿಡದಿಯಲ್ಲಿ 200 ಎಕರೆ ಭೂಮಿ ಹೊಂದಿದ್ದೇನೆ ಎಂಬ ಆರೋಪ ನಿರಾಕರಿಸಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ...
ಎಚ್.ಡಿ ಕುಮಾರ ಸ್ವಾಮಿ
ಎಚ್.ಡಿ ಕುಮಾರ ಸ್ವಾಮಿ
Updated on

ಬೆಂಗಳೂರು: ಭೂ ಕಬಳಿಕೆ ಮಾಡಿ ಬಿಡದಿಯಲ್ಲಿ 200 ಎಕರೆ ಭೂಮಿ ಹೊಂದಿದ್ದೇನೆ ಎಂಬ ಆರೋಪ ನಿರಾಕರಿಸಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ
ನಾನು ಭೂಕಬಳಿಕೆ ಮಾಡಿದ್ದರೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದ್ದಾರೆ.

ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿ 46 ಎಕರೆ ಭೂಮಿಯನ್ನು 80 ರ ದಶಕದಲ್ಲಿ ಸ್ವಂತ ಹಣದಿಂದ ಖರೀದಿಸಿದ್ದು ಬಿಟ್ಟರೆ, ನಮ್ಮ ಕುಟುಂಬಕ್ಕೆ ಸೇರಿದ ಬೇರೆ ಭೂಮಿ ಇಲ್ಲ. ಎಸ್‌.ಆರ್‌. ಹಿರೇಮಠ್‌ ಆರೋಪದಂತೆ 200 ಎಕರೆ ಕಬಳಿಕೆ ಮಾಡಿದ್ದು ಸಾಬೀತಾದರೆ ಅಷ್ಟೂ ಭೂಮಿಯನ್ನು ಹಂಚಿಬಿಡುತ್ತೇನೆ ಎಂದು ಕುಮಾರಸ್ವಾಮಿ ಸೋಮವಾರ ಕರೆದಿದ್ದ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ವಿಧಾನಸೌಧದ ಆವರಣದಲ್ಲಿ  ವಕೀಲರೊಬ್ಬರು ಸಾಗಿಸುತ್ತಿದ್ದ  1.97 ಕೋಟಿ ಪತ್ತೆ ಆದ ಬಳಿಕ ಜನರ ಗಮನವನ್ನು  ಆ ವಿಷಯದಿಂದ ಬೇರೆಡೆ ಸೆಳೆಯುವ ಉದ್ದೇಶದಿಂದ ಭೂ ಕಬಳಿಕೆ ವಿಚಾರ ಪ್ರಸ್ತಾಪಿಸಲಾಗಿದೆ ಎಂದು ಕುಮಾರ ಸ್ವಾಮಿ ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com