ನೈಸ್ ಅಕ್ರಮ: ಸದನದಲ್ಲಿ ವರದಿ ಮಂಡಿಸಲು ವಿಪಕ್ಷಗಳ ಪಟ್ಟು

ಬೆಂಗಳೂರು-ಮೈಸೂರು ನಂಜಿ ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಸಂಸ್ಥೆಯ ಹಗರಣ ಸಂಬಂಧ ಸದನ ಸಮಿತಿ ವರದಿ ಮಂಡಿಸುವಂತೆ ವಿಪಕ್ಷಗಳಾದ ಜೆಡಿಎಸ್ ಮತ್ತು ...
ಆರ್ . ಅಶೋಕ್
ಆರ್ . ಅಶೋಕ್
Updated on

ಬೆಳಗಾವಿ: ಬೆಂಗಳೂರು-ಮೈಸೂರು ನಂಜಿ ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಸಂಸ್ಥೆಯ ಹಗರಣ ಸಂಬಂಧ ಸದನ ಸಮಿತಿ ವರದಿ ಮಂಡಿಸುವಂತೆ ವಿಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ಸದನದಲ್ಲಿ ಆಗ್ರಹಿಸಿವೆ.

ನಗ್ರೋಟಾದಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ನೈಸ್ ಅಕ್ರಮಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ತಯಾರಿಸಿರುವ ವರದಿಯನ್ನು ಅಧಿವೇಶನದಲ್ಲಿ ಮಂಡಿಸಬೇಕೆಂದು ಸ್ಪೀಕರ್ ಬಿ.ಕೋಳಿವಾಡ ಅವರಿಗೆ ಒತ್ತಾಯಿಸಲಾಯಿತು.

ಒಂದು ವಾರದ ಹಿಂದೆಯೇ ವರದಿ ಪೂರ್ಣಗೊಂಡಿದೆ. ವರದಿಯನ್ನು ಸರ್ಕಾರ ತನ್ನ ಬಳಿಯೇ ಇಟ್ಟುಕೊಂಡಿದೆ. ಏಕೆ ಸಾರ್ವಜನಿಕವಾಗಿ ವರದಿಯನ್ನು ಬಹಿರಂಗ ಪಡಿಸಿಲ್ಲ ಎಂದು ಬಿಜೆಪಿಯ ಆರ್. ಅಶೋಕ್ ಪ್ರಶ್ನಿಸಿದರು. ನೈಸ್ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರು ಸಂಕಷ್ಟದಲ್ಲಿದ್ದಾರೆ. ಕಳೆದ ವರ್ಷಗಳಿಂದ ಅವರಿಗೆ ಭೂಮಿಯೂ ಇಲ್ಲ; ಪರಿಹಾರವೂ ಸಿಕ್ಕಿಲ್ಲ. ಈ ಯೋಜನೆ ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಗುಣಾತ್ಮಕವಾದ ಕೆಲಸ ಆಗಬೇಕು ಎಂದರು. ಸಂಪುಟದ ಪವರ್ ಫುಲ್ ಸಚಿವರೊಬ್ಬರು, ಸರ್ಕಾರ ಸದನ ಸಮಿತಿಯ ವರದಿ ಮಂಡನೆಗೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ವರದಿ ಮಂಡಿಸದಂತೆ ಸುಪ್ರೀಂ ಕೋರ್ಟ್ ನಿಂದ ತಡೆಯಾಜ್ಞೆ ತರಲು ನೈಸ್ ಕಂಪೆನಿ ಯತ್ನಿಸುತ್ತಿದೆ. ಅದಕ್ಕೆ ಅವಕಾಶ ನೀಡಬಾರದು’ ಎಂದೂ ಅವರು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಸ್ಪೀಕರ್ ಕೆ.ಬಿ ಕೋಳಿವಾಡ, ಗುರುವಾರ ಸಂಜೆ ಒಳಗೆ ಸದನದಲ್ಲಿ ಮಂಡಿಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸೈಬರ್ ಕ್ರೈಮ್ ನಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ ಎಂದು ಆತಂಕ ವ್ಯಕ್ತ ಪಡಿಸಿದ ಅವರು, ರಾಜ್ಯ ಪೊಲೀಸರ ಆತ್ಮಸ್ಥೈರ್ಯ ಕುಂದಿಸಲಾಗುತ್ತಿದೆ. ಗೃಹ ಇಲಾಖೆಯ ಮೇಲೆ ಇತರ ಇಲಾಖೆ ಸಚಿವರು ಮೂಗು ತೂರಿಸುತ್ತಿದ್ದಾರೆ ಎಂದು ಯಾರೊಬ್ಬರ ಹೆಸರನ್ನು ಹೇಳದೆ ಅಶೋಕ್ ತರಾಟೆಗೆ ತೆಗೆದುಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com