ಉಡುಪಿ: ಶ್ರೀಕೃಷ್ಣ ಮತ್ತು ಶ್ರೀರಾಮ ಇಬ್ಬರು ಮಾಂಸಾಹಾರಿಗಳಾಗಿದ್ದರು ಎಂದು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉಡುಪಿಯಲ್ಲಿ ನಡೆದ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಮಾತನಾಡಿದ ಅವರು, ದೇಶದಾದ್ಯಂತ ಆಹಾರ ಪದ್ಧತಿ ಬಗ್ಗೆ ಚರ್ಚೆ ಆಗುತ್ತಿದೆ. ಸಾಕಷ್ಟು ಮಂದಿ ವಿದ್ವಾಂಸರಿದ್ದಾರೆ. ಈ ಬಗ್ಗೆ ಚರ್ಚೆ ಆಗಲಿ. ಉದ್ದೇಶಪೂರ್ವಕವಾಗಿ ಈ ಮಾತನ್ನು ಹೇಳಿದ್ದೇನೆ ಎಂದರು.
ಮಹಾಸಾಧನೆ ಮಾಡಲು ಜಾತಿ ಮುಖ್ಯ ಅಲ್ಲ. ಮಹಾಭಾರತ ಬರೆದ ವೇದವ್ಯಾಸ ಮದುವೆ ಆಗದ ಮೀನುಗಾರ ಮಹಿಳೆಯ ಪುತ್ರ. ಈ ಕಾಲದಲ್ಲಿ ಅಂತವರು ಇರುತ್ತಿದ್ದರೆ ಸಮಾಜ ಬಹಿಷ್ಕಾರ ಹಾಕುತ್ತಿತ್ತು ಎಂದು ಅವರು ಹೇಳಿದ್ದಾರೆ.
ಇದಕ್ಕೆ ಅಸಮಾಧಾನ ವ್ಯಕ್ತ ಪಡಿಸಿರುವ ಸ್ಥಳೀಯ ಬಿಜೆಪಿ ಮುಖಂಡರು, ಪ್ರಮೋದ್ ಮಧ್ವರಾಜ್ ಹೇಳಿಕೆ ಅಸಮಂಜಸವಾಗಿದೆ. ಇಂಥಹ ಹೇಳಿಕೆಗಳು ಅನಾವಶ್ಯಕ, ಸರಿಯಾದ ತಿಳುವಳಿಕೆ ಇಲ್ಲದೇ ಇಂಥಹ ಹೇಳಿಕೆ ನೀಡಿದ್ದಾರೆ, ಧಾರ್ಮಿಕ ವಿಷಯದಲ್ಲಿ ಅವರು ತಕ್ಷರು ಅಲ್ಲ, ವಿದ್ವಾಂಸರು ಅಲ್ಲ, ಇಂಥಹ ಹೇಳಿಕೆಗಳು ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತವೆ ಎಂದು ಬಿಜೆಪಿ ಉಡುಪಿ ಜಿಲ್ಲೆ ಕಾರ್ಯಕಾರಿ ಮಂಡಳಿ ಸದಸ್ಯ ಉದಯ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
Advertisement