ಶನಿವಾರ ಬೆಂಗಳೂರಿಗೆ ಆಗಮಿಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳಿಧರ ರಾವ್ ರಾಜ್ಯದ ಹಲವು ನಾಯಕರ ಜೊತೆ ಭಾನುವಾರ ಕೂಡ ಸಮಾಲೋಚನೆ ನಡೆಸಿದರು.ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಹಿರಿಯ ಮುಖಂಡರಾದ ಗೋವಿಂದ್ ಕಾರಜೋಳ್, ಸೇರಿದಂತೆ ಹಲವು ಜೊತೆ ಸಭೆ ನಡೆಸಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಕಚ್ಚಾಟದ ಬಗ್ಗೆ ಅವರ ಅಭಿಪ್ರಾಯ ಸಂಗ್ರಹಿಸಿದ್ದಾರೆ.