ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿದ್ದ ಶಿವಕುಮಾರ್ ಗೆ ಈ ಗೆಲುವು ಮತ್ತಷ್ಟು ಬಲ ತಂದುಕೊಟ್ಟಿದೆ. ಪಟೇಲ್ ಗೆಲುವಿಗೆ ಶ್ರಮಿಸಿ ಡಿಕೆಶಿಗಯನ್ನು ಹೈಕಮಾಂಡ್ ಹಾಡಿ ಹೊಗಳಿದೆ. ನಿಮ್ಮ ಕೆಲಸ ಹಾಗೂ ಸಮರ್ಪಣಾ ಭಾವ ಅಮಿತ್ ಶಾ ಮತ್ತು ಮೋದಿ ರಾಜಕೀಯ ತಂತ್ರಗಾರಿಕೆ ವಿರುದ್ಧ ಗೆಲ್ಲಲು ಸಾಧ್ಯವಾಯಿತು ಎಂದು ಹೇಳಿ ಸೋನಿಯಾ ಮತ್ತು ಅಹ್ಮದ್ ಪಟೇಲ್ ಶಿವಕುಮಾರ್ ಬೆನ್ನು ತಟ್ಟಿದ್ದಾರೆ.