ಉ: ಮೇಲ್ನೋಟಕ್ಕೆ ಹಾಗೆ ಅನಿಸುತ್ತಿದೆ. ಇಂಧನ ಸಚಿವ ಶಿವಕುಮಾರ್ ಅವರನ್ನು ಮೂರು ದಿನಗಳ ಕಾಲ ಗೃಹ ಬಂಧನದಲ್ಲಿಡಲಾಗಿತ್ತು, ಅವರ ಫೋನ್ ಕಿತ್ತು ಕೊಳ್ಳಲಾಗಿತ್ತು, ಯಾರೋಬ್ಬರನ್ನು ಮನೆಯ ಒಳಗೆ ಹೋಗಲು ಬಿಡಲಿಲ್ಲ, ಯಾರ ಜೊತೆಗೂ ಮಾತನಾಡಲು ಅವಕಾಶ ನೀಡಲಿಲ್ಲ, ಒಬ್ಬ ಸಚಿವರಾಗಿ ಅವರಿಗೆ ಕೆಲವೊಂದು ಸೌಲಭ್ಯ ಅನುಭವಿಸುವ ಸ್ವಾತಂತ್ರ್ಯವಿಲ್ಲವೇ?, ರೆಸಾರ್ಟ್ ನಲ್ಲಿದ್ದ ಅವರನ್ನು ಮನೆಗೆ ಕರೆತಂದು ವಿಚಾರಣೆ ನಡೆಸಲಾಯಿತು, ಶಿವಕುಮಾರ್ ರೆಸಾರ್ಟ್ ನಿಂದ ಮನೆಗೆ ಬರುವವರೆಗೂ ಐಟಿ ಅಧಿಕಾರಿಗಳು ಕಾಯೂಬೇಕಾಗಿತ್ತು. ನಾನು ಐಟಿ ದಾಳಿ ವಿರೋಧಿಯಲ್ಲ, ಆದರೆ ಅವರು ದಾಳಿ ಮಾಡಿದ ಕ್ರಮ ಸರಿಯಲ್ಲ. ಕಳೆದ ಎರಡು ವರ್ಷಗಳಿಂದ ಕೇವಲ ಕಾಂಗ್ರೆಸ್ ನಾಯಕರನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ.