ಹಿರಿಯ ಶಾಸಕ ತಿಪಟೂರಿನ ಷಡಕ್ಷರಿ ಅವರನ್ನು ಕೈ ಬಿಟ್ಟಿರುವ ಸಿಎಂ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿರುವ ಗೀತಾ ಮಹಾದೇವ ಪ್ರಸಾದ್ ಅವರಿಗೆ ಮಣೆ ಹಾಕಿದ್ದಾರೆ. ಸಂಪುಟದಲ್ಲಿ ಮಹಿಳೆಯರ ಸಂಖ್ಯೆ ತೀರಾ ಕಡಿಮೆಯಿದೆ, ಉಮಾಶ್ರೀ ಬಿಟ್ಟು ಉಳಿದಂತೆ ಉಳಿದ ಯಾವ ಮಹಿಳೆಯರು ಸಚಿವರಾಗಿರಲಿಲ್ಲ, ಹೀಗಾಗಿ ಮಹಿಳೆಯರ ಖೋಟಾದಲ್ಲಿ ಗೀತಾ ಅವರಿಗೆ ಸ್ಥಾನ ಕಲ್ಪಿಸಿರುವುದಾಗಿ ಸಿಎಂ ಸಮರ್ಥಿಸಿಕೊಂಡಿದ್ದಾರೆ.