ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ "ಸಿದ್ದರಾಮಯ್ಯ ಶಾಶ್ವತವಾಗಿ ಮುಖ್ಯಮಂತ್ರಿಯಾಗಿ ಉಳಿಯಲಾರರು. ಇನ್ನು ಮೂರುವರೆ ತಿಂಗಳಿಂಗೆ ಚುನಾವಣೆ ಇದೆ. ಆ ಬಳಿಕ ಯಾವ ಪರಿಸ್ಥಿತಿ ಬರಲಿದೆ ಎನ್ನುವುದು ಗೊತ್ತಿರಬೇಕು. ಕರ್ನಾಟಕ ಗೃಹ ಮಂಡಳಿ ಭೂ ಖರೀದಿ ಪ್ರಕರಣ ಇದಾಗಲೇ ಮುಗಿದ ಅದ್ಯಾಯ. ಬಿಜೆಪಿ ಆಡಳಿತಾವಧಿಯಲ್ಲೇ ಇದರ ತನಿಖೆ ನಡೆದಿದ್ದು ಆರೋಪದಲ್ಲಿ ಸತ್ಯಾಂಶ ಇಲ್ಲವೆಂದು ಸಾಬೀತಾಗಿತ್ತು. ಇದೀಗ ಮತ್ತೆ ಸಿದ್ದರಾಮಯ್ಯ ಎಸಿಬಿ ತನಿಖೆ ಕೈಗೊಳ್ಳುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ದೇವೇಗೌಡರು ಸ್ಪರ್ಧಿಸಲಿದ್ದು ಸಿದ್ದರಾಮಯ್ಯಗೆ ಈಗಿನಿಂದಲೇ ಸೋಲುವ ಭೀತಿ ಎದುರಾಗಿದೆ. ಹಾಗಾಗಿ ಮುಖ್ಯಮಂತ್ರಿಗಳು ಎಸಿಬಿ ಮೊರೆ ಹೋಗಿದ್ದಾರೆ " ಎಂದರು.