ಮದ್ದೂರಿನಲ್ಲಿ ಎಸ್ಎಂ ಕೃಷ್ಣ ಅವರಿಗೆ ಅದ್ಧೂರಿ ಸ್ವಾಗತ ದೊರೆತಿದ್ದು, ಬೆಂಬಲಿಗರು ತಮ್ಮ ನಾಯಕನನ್ನು ಅನುಸರಿಸಲು ನಿರ್ಧರಿಸಿ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದಾರೆ. ಎಸ್ಎಂ ಕೃಷ್ಣ ರಾಜೀನಾಮೆ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲೂ ಸಹ ಪರಿಣಾಮ ಬೀರಿದ್ದು ವಿಧಾನ ಪರಿಷತ್ ನ ಮಾಜಿ ಸದಸ್ಯ, ಎಸ್ಎಂ ಕೃಷ್ಣ ಬೆಂಬಲಿಗ ಡಿ ಮಾದೇಗೌಡ, ಕಾಂಗ್ರೆಸ್ ಮುಖಂಡ ವಿಕ್ರಾಂತ್ ದೇವೇಗೌಡ ಸಹ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದಾರೆ. ಮೈಸೂರಿನಲ್ಲಿಯೂ ಸಹ ಎಸ್ಎಂಕೆ ಬೆಂಬಲಿಗರು ಅವರ ಹಾದಿಯನ್ನೇ ಅನುಸರಿಸಲು ಮುಂದಾಗಿರುವುದರಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಭಾರಿ ಪ್ರಮಾಣದಲ್ಲಿ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.