ರಾಜ್ಯದಲ್ಲಿ ಗುಜರಾತ್ ಶಾಸಕರು ವಾಸ್ತವ್ಯ ಹೂಡಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿರುವ ಹಲವು ಗುಜರಾತಿಗಳು ಮತ್ತು ಸಿಟಿಜನ್ ಆಫ್ ಡೆಮಾಕ್ರಸಿ ಸಂಘದ ಸದಸ್ಯರು ನಗರದ ಮೌರ್ಯ ಸರ್ಕಲ್ ನಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ, ಕೂಡಲೇ ಶಾಸಕರು ತಮ್ಮ ವಿಧಾನಸಭೆ ಕ್ಷೇತ್ರಗಳಿಗೆ ವಾಪಸ್ ತೆರಳುವಂತೆ ಆಗ್ರಹಿಸಿದ್ದಾರೆ.