8 ಎಂಎಲ್ ಸಿಗಳಿಗೆ ಅಮಾನತು ಭೀತಿ: ಸಭಾಪತಿ ಶಂಕರಮೂರ್ತಿ ನೊಟೀಸ್

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ 8 ಎಂಎಲ್ ಸಿಗಳು ಅಮಾನತು ಭೀತಿ ಎದುರಿಸುತ್ತಿದ್ದಾರೆ...
ಡಿ.ಎಚ್. ಶಂಕರಮೂರ್ತಿ
ಡಿ.ಎಚ್. ಶಂಕರಮೂರ್ತಿ
Updated on
ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ 8 ಎಂಎಲ್ ಸಿಗಳು ಅಮಾನತು ಭೀತಿ ಎದುರಿಸುತ್ತಿದ್ದಾರೆ.
ಪರಿಷತ್ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಸಭಾಪತಿ ಡಿಎಚ್ ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಕಾಂಗ್ರೆಸ್‌ ಸದಸ್ಯರು ನೋಟಿಸ್ ನೀಡಿದ ಬೆನ್ನಲ್ಲೇ 2016ರ ಬಿಬಿಎಂಪಿ ಮೇಯರ್ ಚುನಾವಣೆ ಹಾಗೂ 2017ರ ಬಳ್ಳಾರಿ ಸಿಟಿ ಕಾರ್ಪೋರೇಷನ್ ಚುನಾವಣೆಯಲ್ಲಿ ತಪ್ಪು ವಿಳಾಸ ನೀಡಿದ್ದಾರೆಂಬ ಆರೋಪದ ಮೇಲೆ ಶಂಕರಮೂರ್ತಿ ಅವರು 8 ಪರಿಷತ್ ಸದಸ್ಯರಿಗೆ ನೊಟೀಸ್ ನೀಡಿದ್ದಾರೆ.
ಸಭಾಪತಿ ಡಿಎಚ್‌ ಶಂಕರಮೂರ್ತಿ ಅವರು ಪರಿಷತ್‌ ಸದಸ್ಯರುಗಳಾದ ಅಪ್ಪಾಜಿ ಗೌಡ, ರಘು ಆಚಾರ್, ಎಂ.ಡಿ.ಲಕ್ಷ್ಮೀನಾರಾಯಣ ಬೋಸ್‌ರಾಜ್‌ , ಆರ್.ಬಿ ತಿಮ್ಮಾಪುರ, ಎಸ್‌.ರವಿ, ಅಲ್ಲಂ ವೀರಭದ್ರಪ್ಪ  ಮತ್ತು ಸಿ.ಆರ್‌ ಮನೋಹರ್‌ ಅವರಿಗೆ ನೊಟೀಸ್‌ ನೀಡಿದ್ದಾರೆ. 
ರಾಜ್ಯ ಸಭೆಯಲ್ಲಿ ಇಂತಹ ಪ್ರಕರಣಕ್ಕೆ ಕ್ರಿಮಿನಲ್‌ ಕೇಸ್‌ ಹಾಕಲಾಗುತ್ತದೆ. ನಿಮ್ಮ ಮೇಲೆ ಕ್ರಿಮಿನಲ್‌ ಕೇಸ್‌ ಏಕೆ ಹಾಕಬಾರದು ಎಂದು ಪ್ರಶಿನಿಸಿರುವ ಸಭಾಪತಿ ಪ್ರಶ್ನಿಸಿ ಜೂನ್‌ 5 ರ ಒಳಗೆ ಉತ್ತರ ನೀಡುವಂತೆ ಕೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com