2004 ರಲ್ಲಿ ಸೊರಬ ಕ್ಷೇತ್ರದಿಂದ ಜಯಗಳಿಸಿದ ಕುಮಾರ್ , ಧರ್ಮಸಿಂಗ್ ಸಂಪುಟದಲ್ಲಿ ಸಚಿವರಾಗದಂತೆ ಬಂಗಾರಪ್ಪ ತಡೆದರು. 2011 ರಲ್ಲಿ ಬಂಗಾರಪ್ಪ ನಿಧನದ ನಂತರ ಮಧು ಮತ್ತು ಕುಮಾರ್ ನಡುವಿನ ಶತೃತ್ವ ಮತ್ತಷ್ಟು ಜಾಸ್ತಿಯಾಯಿತು. ತಮ್ಮ ತಂದೆಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸದಂತೆ ಕುಮಾರ್ ಬಂಗಾರಪ್ಪ ಅವರನ್ನು ಮಧು ತಡೆದರು. ಸಹೋದರರ ನಡುವಿನ ವೈಷಮ್ಯ ಬಗೆಹರಿಸಲು ಹಲವರು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ, ಸದ್ಯ ಕುಮಾರ್ ಬಿಜೆಪಿಯಲ್ಲಿದ್ದು, ಮಧ ಬಂಗಾರಪ್ಪ ಜೆಡಿಎಸ್ ನಲ್ಲಿದ್ದಾರೆ.