ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಸೇನಾ ಮುಖ್ಯಸ್ಥರ ವಿರುದ್ಧ ಯಾವುದೇ ರಾಜಕಾರಣಿ ಹೇಳಿಕೆ ನೀಡಬಾರದು: ರಾಹುಲ್ ಗಾಂಧಿ

ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರನ್ನು ಬೀದಿ ಗೂಂಡಾ ಎಂದಿದ್ದ ಕಾಂಗ್ರೆಸ್ ನಾಯಕ ಸಂದೀಪ್ ದಿಕ್ಷಿತ್ ಅವರನ್ನು ತರಾಟೆಗೆ...
ಬೆಂಗಳೂರು: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರನ್ನು ಬೀದಿ ಗೂಂಡಾ ಎಂದಿದ್ದ ಕಾಂಗ್ರೆಸ್ ನಾಯಕ ಸಂದೀಪ್ ದಿಕ್ಷಿತ್ ಅವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಸೇನಾ ಮುಖ್ಯಸ್ಥರ ವಿರುದ್ಧ ಯಾವುದೇ ರಾಜಕಾರಣಿ ಹೇಳಿಕೆ ನೀಡಬಾರದು ಎಂದು ಸೋಮವಾರ ಹೇಳಿದ್ದಾರೆ.
ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದಿಕ್ಷಿತ್ ಅವರ ಪುತ್ರರಾಗಿರುವ ಸಂದೀಪ್ ದಿಕ್ಷಿತ್ ಅವರು, ಪಾಕಿಸ್ತಾನದ ಸೇನೆಯಂತೆ ನಮ್ಮ ಸೇನೆ ಮಾಫಿಯಾ ಸೇನೆಯಲ್ಲ. ನಮ್ಮದು  ಉತ್ತಮ ಸುಸಂಸ್ಕೃತ  ಹಿನ್ನೆಲೆಯುಳ್ಳ ಸೇನೆ. ಆದರೆ, ಅಂತಹ ಹಿನ್ನೆಲೆಯುಳ್ಳ  ಸೇನೆಯ ಮುಖ್ಯಸ್ಥರು ಪಾಕಿಸ್ತಾನದ ಸೇನೆಯ ರೀತಿಯಲ್ಲಿ ಬೀದಿಯ ಗೂಂಡಾನಂತೆ ಹೇಳಿಕೆ ನೀಡುತ್ತಿರುವುದು ನಿಜಕ್ಕೂ ವಿಷಾದನೀಯ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಸಂದೀಪ್ ದಿಕ್ಷಿತ್ ಅವರ ಹೇಳಿಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಅವರನ್ನು  ಕಾಂಗ್ರೆಸ್‌ನಿಂದ ಉಚ್ಚಾಟಿಸುವಂತೆ ಬಿಜೆಪಿ ಒತ್ತಾಯಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com