ಆತ್ಮೀಯ ಗೆಳೆಯರೆ, ಕರ್ನಾಟಕದ ರಾಜಕೀಯ ಕರ್ಣನ ನಡೆ ಬಗ್ಗೆ ಒಂದು ಮಾಹಿತಿ... ಜೂನ್ 23ರಂದು 40 ವರ್ಷಗಳ ಕಾಂಗ್ರೆಸ್ ಪಕ್ಷದ ಸಂಬಂಧವನ್ನು ಒಲ್ಲದ ಮನಸಿನಿಂದ ಕಡಿದುಕೊಂಡ ಬಳಿಕ ಸುಮಾರು ಒಂದು ವಾರಗಳ ಕಾಲ ಅಭಿಮಾನಿಗಳು ಹಾಗೂ ಸ್ನೇಹಿತರೊಂದಿಗೆ ಚರ್ಚಿಸಿ ಅಂತಿಮವಾಗಿ ಕರ್ನಾಟಕದ ನೆಲ ಜಲ ಹಾಗೂ ರೈತರ ಕಷ್ಟಕ್ಕೆ ಸ್ಪಂದಿಸುವ ಹಾಗೂ ತಮ್ಮನ್ನು ನಂಬಿರುವ ಮುಸ್ಲಿಂ ಗೆಳೆಯರಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ನಮ್ಮ ತಂದೆಯವರು ಜುಲೈ 4ರಂದು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆಯುತ್ತಿದ್ದಾರೆ. ಅಂದು ಸಾಹೇಬರ ಅಭಿಮಾನಿಗಳು, ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅವರ ಕೈ ಬಲಪಡಿಸುವಂತೆ ಪೂರ್ವಜ್ ಫೇಸ್ ಬುಕ್ ನಲ್ಲಿ ಕೋರಿದ್ದಾರೆ.