ಉಳಿದ ಎರಡು ಸ್ಥಾನಗಳಿಗೆ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ, ಚಿನ್ನದ ವ್ಯಾಪಾರಿ ಕೆ.ಪಿ. ನಂಜುಂಡಿ, ಪಿ.ಆರ್. ರಮೇಶ್, ಜಿ.ಸಿ. ಚಂದ್ರಶೇಖರ್, ಸಿ.ಎಂ. ಲಿಂಗಪ್ಪ ಮಧ್ಯೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಒಕ್ಕಲಿಗ ಸಮುದಾಯದಿಂದ ಸಿ.ಎಂ. ಲಿಂಗಪ್ಪ ಮತ್ತು ಜಿ.ಸಿ. ಚಂದ್ರಶೇಖರ್ ಮಧ್ಯೆ ಪೈಪೋಟಿ ಏರ್ಪಟ್ಟಿದ್ದರಿಂದಾಗಿ ಆಯ್ಕೆ ಕಗ್ಗಂಟಾಗಿತ್ತು. ರಾಮನಗರ ದವರಾದ ಲಿಂಗಪ್ಪ ಪರ ಇಂಧನ ಸಚಿವ ಡಿ.ಕೆ. ಶಿವಕುಮಾರ್ ವಕಾಲತ್ತು ವಹಿಸಿ, ಪ್ರಭಾವ ಬೀರಿದ್ದರು.