ಗುರುವಾರ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿಗೆ ಅಪಾಯಿಂಟ್ ಮೆಂಟ್ ಗಾಗಿ ಡಿಕೆಶಿ ಕಾಯುತ್ತಿದ್ದಾರೆ, ಕೆಪಿಸಿಸ ಅಧ್ಯಕ್ಷ ಹುದ್ದೆಯ ನೇಮಕಾತಿ ಸಂಬಂಧ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಲಿದ್ದಾರೆ ಎಂದು ಡಿಕೆಶಿ ಆಪ್ತ ವಲಯ ತಿಳಿಸಿದೆ, ಚುನಾವಣೆ ಸಿದ್ಧತೆ ತಯಾರಿಯಲ್ಲಿರುವ ಕಾಂಗ್ರೆಸ್ ಈಗಾಗಲೇ ರಾಜ್ಯಕ್ಕೆ ಹೊಸ ಉಸ್ತುವಾರಿ ನೇಮಿಸಿದೆ. ಜೊತೆಗೆ ಮೂವರು ಎಂ ಎಲ್ ಸಿಗಳ ನಾಮ ನಿರ್ದೇಶನಕ್ಕೂ ಅಂಕಿತ ಹಾಕಿದೆ.ಮುಂದಿನ ಕೆಲ ದಿನಗಳಲ್ಲೇ ಕೆಪಿಸಿಸಿ ಗೆ ಹೊಸ ಅಧ್ಯಕ್ಷರನ್ನು ನೇಮಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.