ಆದರೆ ಕೆಲ ಬಿಜೆಪಿ ನಾಯರು ಎಲ್ಲವೂ ಸರಿಯಿದೆ ಎಂದು ಹೇಳಿದ್ದಾರೆ, ಇಬ್ಬರು ನಾಯಕರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂಬುದನ್ನು ಹೇಳಿ ತಿಪ್ಪೆ ಸಾರಿಸುವ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ವೈಮನಷ್ಯಕ್ಕೆ ಕಡಿವಾಣ ಹಾಕಿ ಪಕ್ಷದ ಹೈಕಮಾಂಡ್ ಕಠಿಣ ಸಂದೇಶ ನೀಡುತ್ತಾರೆ ಎಂದು ಹಲು ಮಂದಿ ನಿರೀಕ್ಷಿಸಿದ್ದರು, ಆದರೆ ಇದ್ಯಾವುದು ನಡೆಯಲ್ಲಿಲ್ಲ, ಇಬ್ಬರು ನಾಯಕರು ತಮ್ಮನ ಅಹಂಕಾರ ಪ್ರತಿಷ್ಠೆಯನ್ನು ಬದಿಗೊತ್ತಿ ಪರಸ್ಪರ ಮಾತನಾಡಲಿಲ್ಲ. ಹೆಗಲಿಗೆ ಹೆಗಲು ಕೊಟ್ಟು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದು ಶಪಥ ಮಾಡುವ ಔದಾರ್ಯವನ್ನು ಇಬ್ಬರು ನಾಯಕರು ತೋರಲಿಲ್ಲ ಎಂದು ಕೆಲ ನಾಯಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.