ಜೆಡಿಎಸ್ ಪಕ್ಷ ಕೂಡ ಸುಮ್ಮನೇ ಕೂತಿಲ್ಲ, ಗ್ರಾಮೀಣ ಭಾಗದ ಮತದಾರರನ್ನು ಸೆಳೆಯಲು ಹೊಸ ತಂತ್ರವೊಂದನ್ನು ರೂಪಿಸಿದೆ, ಪಕ್ಷದ ವರಿಷ್ಠ ಎಚ್ .ಡಿ ದೇವೇಗೌಡರ 85ನೇ ಹುಟ್ಟುಹಬ್ಬದ ಅಂಗವಾಗಿ,ಮೇ 18 ರಿಂದ ಮುದ್ದೆ ಮತ್ತು ರೋಟಿ ಪೇ ಚರ್ಚಾ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ.ದಕ್ಷಿಣ ಕರ್ನಾಟಕದವರಿಗಾಗಿ ಮುದ್ದೆ ಪೇ ಚರ್ಚಾ, ಉತ್ತರ ಕರ್ನಾಟಕದವರಿಗಾಗಿ ರೋಟಿ ಪೇ ಚರ್ಚಾ ನಡೆಸಲಿದೆ. ಈ ಚರ್ಚೆ ವೇಳೆ ಕಾವೇರಿ ನದಿ ನೀರು ಹಂಚಿಕೆಯಲ್ಲಿ ಅನ್ಯಾಯ ಮತ್ತು ಕಳಸಾ ಬಂಡೂರಿ ವಿವಾದಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ವೈಫಲ್ಯಗಳ ಕುರಿತು ಚರ್ಚಿಸಲಾಗುವುದು ಎಂದು ಶಾಸಕ ವೈಎಸ್ ವಿ ದತ್ತಾ ಹೇಳಿದ್ದಾರೆ.