ಬೆಂಗಳೂರಿನಲ್ಲಿ ನಿನ್ನೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಿಕ್ಕಿರುವ ಆಡಿಯೊ ಕ್ಲಿಪ್ ನಲ್ಲಿ ಸಚಿವ ವಿನಯ್ ಕುಲಕರ್ಣಿಯವರು ಯೋಗೀಶ್ ಗೌಡರ ಪರ ವಕೀಲರಿಗೆ ಬೆದರಿಕೆಯೊಡ್ಡುತ್ತಿರುವ ಮಾತು ಬಲವಾದ ಸಾಕ್ಷ್ಯಗಳನ್ನು ಒದಗಿಸುತ್ತಿದೆ. ಇದರಲ್ಲಿ ವಿನಯ್ ಕುಲಕರ್ಣಿಯವರ ಪಾತ್ರವಿರುವುದು ಕಂಡುಬರುತ್ತಿರುವುದರಿಂದ ಈ ಕೂಡಲೇ ಸಂಪುಟದಿಂದ ವಿನಯ್ ಕುಲಕರ್ಣಿಯವರನ್ನು ಕೈ ಬಿಟ್ಟು ನಿಸ್ಪಕ್ಷಪಾತ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಬೇಕು ಎಂದು ಹೇಳಿದರು.