ಮಂಡ್ಯ ಭಾಗದ ಪ್ರಬಲ ಒಕ್ಕಲಿಗ ನಾಯಕನಾಗಿರುವ ಚಿತ್ರನಟ ಹಾಗೂ ಶಾಸಕ ಅಂಬರೀಷ್ ಪಕ್ಷ ತಮ್ಮನ್ನು ನಿರ್ಲಕ್ಷ್ಯಿಸಿದೆ ಎಂದು ದೂರಿದ್ದಾರೆ. ಮಂಡ್ಯ ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂಬುದು ಅಂಬರೀಷ್ ಅವರ ಅಳಲಾಗಿದೆ. ನಾನು ಟಿಕೆಟ್ ಗಾಗಿ ಅರ್ಜಿ ಸಲ್ಲಿಸುವುದಿಲ್ಲ, ನನಗೆ ಟಿಕೆಟ್ ನೀಡಿದರೇ ಸ್ಪರ್ದಿಸುತ್ತೇನೆ ಇಲ್ಲದಿದ್ದರೇ, ನನಗೇನು ತೊಂದರೆಯಿಲ್ಲ, ನನ್ನ ಆರೋಗ್ಯ ನನಗೆ ಮುಖ್ಯ, ನನಗೆ ಟಿಕೆಟ್ ಬೇಕಾಗಿಲ್ಲ ಎಂದು ಕಡ್ಡಿ ತುಂಡರಿಸಿದಂತೆ ಮಾತನಾಡಿದ್ದಾರೆ.