ಚಿಕ್ಕಪೇಟೆಗೆ ರಮೇಶ್ ಬದಲಾಗಿ ಉದಯ ಗರುಡಚಾರ್ ಅವರಿಗೆ ಟಿಕೆಟ್ ನೀಡಲಾಗಿದೆ. ಸಂಘಪರಿವಾರದ ಸದಸ್ಯರು ಸೇರಿದಂತೆ ಹಲವು ಬಿಜೆಪಿ ನಾಯಕರು ನನಗೆ ಟಿಕೆಟ್ ಕೊಡಲು ಬಯಸಿದ್ದರು. ಆದರೆ ಅನಂತ್ ಕುಮಾರ್ ಮತ್ತು ಕೆಲವು ನಾಯಕರು ಇದನ್ನು ತಪ್ಪಿಸಿದ್ದಾರೆ, ಬಿಜೆಪಿಯಲ್ಲಿ ಪ್ರಾಮಾಣಿಕತೆಗೆ ಬೆಲೆಯಿಲ್ಲ, ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.