ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಅನುಪಮಾ ಶೆಣೈ ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.2013ರ ವಿಧಾನಸಭೆ ಚುನಾವಣೆ ವೇಳೆ ಪ್ರೊಬೆಷನರಿ ಅಧಿಕಾರಿಯಾಗಿದ್ದ ಅನುಪಮಾ ಅವರನ್ನು ಟಿ, ನರಸಿಪುರಕ್ಕೆ ಎಲೆಕ್ಷನ್ ಡ್ಯೂಟಿಗೆ ಹಾಕಲಾಗಿತ್ತು, ಅಂದು ನಾನು ಕರ್ತವ್ಯದಲ್ಲಿದ್ದೆ, ಇಂದು ನಾನೇ ಚುನಾವಣೆಯಲ್ಲಿ ಸ್ಪರ್ದಿಸುತ್ತಿದ್ದೇನೆ, ನನಗೆ ಮಿಶ್ರ ಅನುಭವವಾಗುತ್ತಿದೆ, ನಾನು ರಾಜಕೀಯಕ್ಕೆ ಸೇರಲು ರಾಜಿನಾಮೆ ನೀಡಬೇಕಿತ್ತು ಅಥವಾ ವಿಆರ್ ಎಸ್ ತೆಗೆದುಕೊಳ್ಳಬೇಕಿತ್ತು, ಆಧರೆ ಆ ಸಮಯ ಇಷ್ಟು ಬೇಗ ಬರುತ್ತದೆ ಎಂದು ನಾನು ಎಣಿಸಿರಲಿಲ್ಲ ಎಂದು ಹೇಳಿದ್ದಾರೆ.