ಸರ್ಕಾರ ಬದಲಾದರೂ ಇಲ್ಲಿನ ರೈತರ ಹಣೆ ಬರಹ ಬದಲಾಗುವುದಿಲ್ಲ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವ ಪಕ್ಷದ ಸರ್ಕಾರವೇ ಬಂದರೂ ಸಮಸ್ಯೆಗೆ ಮುಕ್ತಿಯಿಲ್ಲ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳಿಗೆ ಜನ ಮತ ಹಾಕಿದ್ದಾರೆ, ಯಡಿಯೂರಪ್ಪ ಸರ್ಕಾರದ ವಿರೋಧಿಸಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ಹಾಕಲಾಯಿತು, ಆದರೆ ಈ ಬಾರಿ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಆಡಳಿತ ವಿರೋಧಿ ಅಲೆಯಿದೆ, ಪ್ರತಿ ಚುನಾವಣೆಯಲ್ಲಿಯೂ ಭರವಸೆ ನೀಡಿ ನಂತರ ಅಷ್ಟೇ ಪ್ರಾಮಾಣಿಕವಾಗಿ ಮರೆತು ಬಿಡಲಾಗುತ್ತದೆ ಎಂದು ರೈತ ಕೇಶಪ್ಪ ಪೂಜಾರ್ ಎಂಬುವರು ಹೇಳಿದ್ದಾರೆ.