ಸಿದ್ದರಾಮಯ್ಯ ಸರ್ಕಾರದ ಈಡೇರದ ಭರವಸೆ; ಜಾತಿ ಗುರುತು ಪತ್ರಕ್ಕೆ ಕಾಯುತ್ತಿರುವ ಬಾಂಗ್ಲಾ ಹಿಂದೂಗಳು

ಇಲ್ಲಿನ ಶಿಬಿರಗಳಲ್ಲಿ ನೆಲೆಸಿರುವ 22 ಸಾವಿರ ಬಾಂಗ್ಲಾದೇಶದ ಆಶ್ರಿತರಲ್ಲಿ 12,000 ಮಂದಿ ಮತದಾನದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯಚೂರು: ಇಲ್ಲಿನ ಶಿಬಿರಗಳಲ್ಲಿ ನೆಲೆಸಿರುವ 22 ಸಾವಿರ ಬಾಂಗ್ಲಾದೇಶದ ಆಶ್ರಿತರಲ್ಲಿ 12,000 ಮಂದಿ ಮತದಾನದ ಹಕ್ಕು ಹೊಂದಿದ್ದರೂ ಕೂಡ ರಾಜ್ಯ ಸರ್ಕಾರ ಅವರನ್ನು ಪರಿಶಿಷ್ಟ ಜಾತಿ ಎಂದು ಪರಿಗಣಿಸದಿರುವುದರಿಂದ ಮತದಾನ ಮಾಡಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಕಾಂಗ್ರೆಸ್ ನಲ್ಲಿ ಇವರು ನಿರ್ಧರಿತ ಅಂಶವಾಗಿದ್ದಾರೆ.

ರಾಯಚೂರಿನ ಸಿಂಧನೂರು ತಾಲ್ಲೂಕಿನ ಬಾಂಗ್ಲಾದೇಶ ಶಿಬಿರದಲ್ಲಿರುವ ಎರಡನೇ ತಲೆಮಾರಿನ ನಿವಾಸಿ ಪ್ರಸೆನ್ ರಪ್ತಾನನಂತವರು ಶೇಕಡಾ 10 ಮಂದಿಯಿದ್ದಾರೆ. ಅವರು ಶಿಕ್ಷಣವಂತರಾಗಿದ್ದರೂ ಕೂಡ ಇಲ್ಲಿನ ಜಾತಿ ರಾಜಕಾರಣ ಕರ್ನಾಟಕ ರಾಜ್ಯದ ವಸಾಹತುಶಾರರ ಆಕಾಂಕ್ಷೆಗಳನ್ನು ಕುಗ್ಗಿಸಿದೆ.

1971ರಲ್ಲಿ ಪೂರ್ವ ಪಾಕಿಸ್ತಾನ ಹೊಸ ರಾಜ್ಯದ ಉದಯಕ್ಕೆ ಪ್ರಯತ್ನಿಸುತ್ತಿದ್ದಾಗ ಬಾಂಗ್ಲಾದೇಶದಲ್ಲಿದ್ದ ಹಲವು ಹಿಂದೂಗಳು ದೌರ್ಜನ್ಯಗಳನ್ನು ಎದುರಿಸುತ್ತಿದ್ದರು. ಆ ಸಂದರ್ಭದಲ್ಲಿ ದೇಶ ಬಿಟ್ಟು ಭಾರತಕ್ಕೆ ಪ್ರವೇಶಿಸಿದರು. ಅಂದಿನ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಸಲಹೆ ಮೇರೆಗೆ ಬಾಂಗ್ಲಾದ ಹಿಂದೂಗಳು ಭಾರತಕ್ಕೆ ಬಂದು ವಿವಿಧ ಭಾಗಗಳಲ್ಲಿ ಆಶ್ರಯ ಪಡೆದರು.

ಕೇಂದ್ರ ಸರ್ಕಾರ ಬಾಂಗ್ಲಾದೇಶದ ಹಿಂದೂಗಳಿಗೆ ಇಲ್ಲಿ ಉಳಿದುಕೊಳ್ಳಲು ಹಲವು ಕಾರ್ಯಕ್ರಮಗಳನ್ನು ಆರಂಭಿಸಿತು. ಅದರಂತೆ ಬಾಂಗ್ಲಾದ ಹಿಂದೂಗಳು ಅಸ್ಸಾಂ, ಮಿಜೋರಂ, ಮಣಿಪುರ, ತ್ರಿಪುರಾ, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ನೆಲೆಸಿದ್ದಾರೆ.

ಅಲ್ಲಿ ವಸತಿ ಸಮಸ್ಯೆ ಹೆಚ್ಚಿದಾಗ ನಿರಾಶ್ರಿತರು ಈಶಾನ್ಯ ಭಾರತಗಳಿಗೆ ವಲಸೆ ಹೋದರು. ಕರ್ನಾಟಕದ ರಾಯಚೂರಿಗೆ ಸಹ ಬಂದು ನೆಲೆಸಿದರು. ಆರಂಭದ ದಿನಗಳಲ್ಲಿ ಸರ್ಕಾರ ಅವರಿಗೆ ಆರ್ಥಿಕವಾಗಿ ಸದೃಢರಾಗಲು ಜಮೀನುಗಳನ್ನು ನೀಡಿತ್ತು. 1979ರಲ್ಲಿ ಭಾರತದ ನಾಗರಿಕತ್ವ ನೀಡಿ ಮತದಾನದ ಹಕ್ಕನ್ನು ಕೂಡ ಭಾರತ ಸರ್ಕಾರ ಕಲ್ಪಿಸಿತು.

ಬಾಂಗ್ಲಾದೇಶದಿಂದ ವಲಸೆ ಬಂದ ಹಿಂದೂಗಳಿಗೆ ರಾಯಚೂರು ಜಿಲ್ಲೆಯಲ್ಲಿ ನಾಲ್ಕು ಶಿಬಿರಗಳಿದ್ದು ಆರ್ ಎಚ್ 2, ಆರ್ ಎಚ್ 3, ಆರ್ ಎಚ್ 4 ಮತ್ತು ಆರ್ ಎಚ್ 5 ಎಂಬುದಾಗಿದೆ. ಇಲ್ಲಿ ಒಟ್ಟು 22,000 ಜನರಿದ್ದು ಈ ವಿಧಾನಸಭೆ ಚುನಾವಣೆಯಲ್ಲಿ 12,000 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ.

ಈ ಬಾಂಗ್ಲಾ ಹಿಂದೂಗಳಿಗೆ ನೆಲೆಗೆ ಭೂಮಿ ನೀಡಿದರೂ ಕೂಡ ಭೂಮಿಯ ಹಕ್ಕುಪತ್ರವನ್ನು ನೀಡಿಲ್ಲ. ಭೂಮಿಯನ್ನು ಉಳಬಹುದೇ ಹೊರತು ಅದರ ಹಕ್ಕುಗಳನ್ನು ಹೊಂದಿಲ್ಲ. ಕಂದಾಯ ಇಲಾಖೆ ದಾಖಲೆಗಳಲ್ಲಿ ನಮ್ಮ ಜಮೀನಿನ ಒಡೆತನ ಸರ್ಕಾರದ್ದು ಎಂದಿದೆ ಎನ್ನುತ್ತಾರೆ ಶಿವ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com