ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಅನಂತಕುಮಾರ್ ಹೆಗಡೆ

ಕೇಂದ್ರ ಕೌಶಲಾಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಅವರು ಭಾನುವಾರ ಮತ್ತೊಂದು ವಿವಾದಾತ್ಮಕ....
ಅನಂತಕುಮಾರ್ ಹೆಗಡೆ
ಅನಂತಕುಮಾರ್ ಹೆಗಡೆ
ಬೆಳಗಾವಿ: ಕೇಂದ್ರ ಕೌಶಲಾಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಅವರು ಭಾನುವಾರ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೇವಸ್ಥಾನ, ಮಸೀದಿಗಳಿಗೆ ಹೋಗುವ ರೀತಿಯಲ್ಲೇ ಶ್ರವಣಬೆಳಗೊಳಕ್ಕೂ ಹೋಗಲಿ ಎಂದಿದ್ದಾರೆ.
ಇಂದು ಬೆಳಗಾವಿ ಜಿಲ್ಲೆಯ ಕಿತ್ತೂರಿನ ತಿಗಡೊಳ್ಳಿಯಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅನಂತಕುಮಾರ್ ಹೆಗಡೆ, ರಾಹುಲ್ ಗಾಂಧಿಗೆ ಹಿಂದೂ ಧರ್ಮ ಒಂದಿದೆ ಎಂದು ಈಗ ನೆನಪಾಗಿಬಿಟ್ಟಿದೆ. ಅದಕ್ಕಾಗಿ ಎಲ್ಲ ದೇವಸ್ಥಾನ, ಮಠ, ಮಂದಿರಗಳಿಗೆ ಹೋಗಲು ಪ್ರಾರಂಭಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿಗೆ ದೇವರಿಗೆ ಹೋದಾಗ ತೀರ್ಥ ಕೊಟ್ಟರೆ ಹೇಗೆ ಕುಡಿಯಬೇಕೆಂಬುದು ಗೊತ್ತಿಲ್ಲ. ಯಾರೋ ಹೇಳಿದರೆಂದು ದೇವಸ್ಥಾನಕ್ಕೆ ಕಾವಿ ಬಟ್ಟೆ ತೊಟ್ಟು ಹೋದರು. ಮಠಕ್ಕೆ ಹೋಗಲು ರುದ್ರಾಕ್ಷಿ ಮಾಲೆ ಹಾಕಿಕೊಂಡು ಹೋದರು. ಮಸೀದಿಗೆ ಹೋಗಬೇಕೆಂದರೆ ಕೋಳಿಪುಕ್ಕ ಹಾಕಿಕೊಂಡು ಹೋದರು. ಚರ್ಚಿಗೆ ಹೋಗಬೇಕೆಂದರೆ ಕೊರಳಲ್ಲಿ ಸಿಲುಬೆ ಕಟ್ಟಿಕೊಂಡ ಹೋದರು ಎಂದರು. 
ರಾಹುಲ್ ಗಾಂಧಿ​ಗೆ ನಾನು ಹೇಳುತ್ತೇನೆ ನಮ್ಮ ದೇಶದ ಅತ್ಯಂತ ದೊಡ್ಡ ಶ್ರದ್ಧಾಕೇಂದ್ರ ಶ್ರವಣಬೆಳಗೊಳಕ್ಕೂ ಹೋಗಿಬನ್ನಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಜೈನ ದಿಗಂಬರ ರೀತಿ ಮೈಮೇಲೆ ಬಟ್ಟೆಯಿಲ್ಲದೆ ಹೋಗಬೇಕು ಎಂದು ಹೆಗಡೆ ಛೇಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com