ದೇವೇಗೌಡ, ಯಡಿಯೂರಪ್ಪ ಮತ್ತು ಕುಮಾರ ಸ್ವಾಮಿ
ದೇವೇಗೌಡ, ಯಡಿಯೂರಪ್ಪ ಮತ್ತು ಕುಮಾರ ಸ್ವಾಮಿ

ಉತ್ತರ ಕರ್ನಾಟಕ ಪ್ರತ್ಯೇಕ ಹೋರಾಟ ವಿಚಾರ: ದೇವೇಗೌಡರಿಗೆ ಬಿಎಸ್ ವೈ ಕೇಳಿದ ಮೂರು ಪ್ರಶ್ನೆಗಳು ಏನು ಗೊತ್ತೆ?

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಮಾಡುತ್ತಿರುವ ಅವಾಂತರಗಳಿಗೆ ದೇವೇಗೌಡರೇ ...
ಬೆಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಮಾಡುತ್ತಿರುವ ಅವಾಂತರಗಳಿಗೆ ದೇವೇಗೌಡರೇ ಕಾರಣ, ಹೀಗಾಗಿ ಅವರೇ ನನ್ನ  ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಮಾತನಾಡಿದ ಯಡಿಯೂರಪ್ಪ, ಉತ್ತರ ಕರ್ನಾಟಕ ವಿಚಾರದಲ್ಲಿ  ಬೆಂಕಿ ಹಚ್ಚಿದ್ದು ಸಿಎಂ ಕುಮಾರ ಸ್ವಾಮಿ, ಆದರೆ ನನ್ನನ್ನು ಸಿಕ್ಕಿಸಲಾಗುತ್ತಿದೆ. ಹೀಗಾಗಿ ನಾನು ಮಾಜಿ ಪ್ರಧಾನಿ  ಎಚ್ .ಡಿ ದೇವೇಗೌಡರಿಗೆ ಮೂರು ಪ್ರಶ್ನೆಗಳನ್ನು ಕೇಳುತ್ತೇನೆ, ಅದಕ್ಕೆ ದೇವೇಗೌಡರು ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ದೇವೇಗೌಡರಿಗೆ ಬಿ,ಎಸ್ ಯಡಿಯೂರಪ್ಪ ಅವರ ಮೂರುಪ್ರಶ್ನೆಗಳು
1 ಉತ್ತರ ಕರ್ನಾಟಕಕ್ಕೇ ಲಿಂಗಾಯತ ಸಿಎಂಗಳ ಕೊಡುಗೆ ಎನು ಎಂದು ಕೇಳಿದ್ದು ಯಾರು ?
2 ಉತ್ತರ ಕರ್ನಾಟಕದಿಂದ ರಾಜ್ಯಕ್ಕೆ ಏನು ಕೊಡುಗೆ ಏನು ಎಂದು ಹುಬ್ಬಳ್ಳಿಯಲ್ಲಿ ಪ್ರಶ್ನಿಸಿದವರು ಯಾರು?
3. ಚನ್ನಪಟ್ಟಣದಲ್ಲಿ ಜಾತಿ ಆಧಾರದಲ್ಲಿ ಮತ ಕೇಳಿದ್ದು ಯಾರು? 
ಎಂದು ಯಡಿಯೂರಪ್ಪ ಪ್ರಶ್ನಿಸಿದ್ದಾರೆ, ಈ ಎಲ್ಲಾ ಪ್ರಶ್ನೆಗಳನ್ನು ಹಾಕಿದವರು ಸಿಎಂ ಕುಮಾರ ಸ್ವಾಮಿ, ಹೀಗಾಗಿ ಅವರ ತಂದೆ ಎಚ್,ಡಿ ದೇವೇಗೌಡ ನನ್ನ ಈ ಎಲ್ಲಾ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕು ಎಂದು ತಿಳಿಸಿದ್ದಾರೆ.
ಇನ್ನೂ ಇದೇ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಮಾತನಾಡಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಕರ್ನಾಟಕ ಏಕೀಕರಣಕ್ಕಾಗಿ  ಸಾಕಷ್ಟು ಜನ ಹೋರಾಟ ಮಾಡಿದ್ದಾರೆ, ಹೋರಾಡಿದವರು ಈಗಿಲ್ಲ,  ಇತ್ತೀಚಿನ ರಾಜಕಾರಣಿಗಳನ್ನು ಅವರು ಕ್ಷಮಿಸುವುದಿಲ್ಲ, ನನ್ನ ವಿರುದ್ಧ ಅಸಂಬದ್ದ ಹೇಳಿಕೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com