ಬೆಂಗಳೂರು: ರೈತರ ಸಾಲಮನ್ನಾ, ಪ್ರವಾಹ ಪೀಡಿತ ಕೊಡಗಿನ ಪರಿಹಾರ ಕಾರ್ಯದ ಜೊತೆಗೆ ಎಲ್ಲಕ್ಕಿಂತ ಮುಖ್ಯವಾಗಿ ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷದ ನಿರಂತರ ಬೆದರಿಕೆ ಸಿಎಂ ಕುಮಾರ ಸ್ವಾಮಿ ಅವರ ನಿದ್ದೆಗೆಡಿಸಿದೆ, ಇವೆಲ್ಲದರ ನಡುವೆ ಸೋಮವಾರ ಸಿಟಿ ಸಿವಿಲ್ ಕೋರ್ಟ್ ನೀಡಿದ ತೀರ್ಪು ಕುಮಾರ ಸ್ವಾಮಿ ಪಾಲಿಗೆ ಸ್ವಲ್ಪ ನೆಮ್ಮದಿ ತಂದಿದೆ. ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸಿಎಂ ಕುಮಾರ ಸ್ವಾಮಿ ಅವರನ್ನು ಕೋರ್ಟ್ ಆರೋಪ ಮುಕ್ತ ಗೊಳಿಸಿದೆ.