ಕಳೆದ ವಾರ ಸಂಸತ್ತಿನಲ್ಲಿ ಒಂದು ಗಂಟೆ ಭಾಷಣ ಮಾಡಿದ ಪ್ರಧಾನಿ ಮೋದಿ, ನಗರವಾಸಿಗಳೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಕುರಿತಾಗಿ ಅವರು ಎಲ್ಲೂ ಬಾಯಿ ಬಿಡಲಿಲ್ಲ. ಭಾರತದ ಯುವಕಗಗೆ ಉದ್ಯೋಗ ಕೊಡುವ ಮಾತುಗಳಿರಲಿಲ್ಲ. ರೈತರಿಗೆ ಸಹಾಯ ಮಾಡುವ ಮಾತಿರಲಿಲ್ಲ. ಒಂದು ಗಂಟೆಯನ್ನು ಅವರು ಕಾಂಗ್ರೆಸ್ ಪಕ್ಷ ಹಾಗೂ ಹಿಂದೆ ಏನೇನು ನಡೆದಿದೆ ಎಂಬುವುದನ್ನು ನೆನಪಿಸಿ ಟೀಕೆ ಮಾಡುವುದರಲ್ಲೇ ಕಳೆದಿದ್ದೀರಿ, ಸಮಸ್ಯೆ ಕುರಿತಾಗಿ ಒಂದು ಮಾತೂ ಆಡಿಲ್ಲ ಎಂದು ರಾಹುಲ್ ಕಿಡಿಕಾರಿದರು.