ಕಳೆದ ಶನಿವಾರ ಹೊಸಪೇಟೆಯಿಂದ ಆರಂಭವಾದ ಕಾಂಗ್ರೆಸ್ ಜನಾರ್ಶೀವಾದ ಯಾತ್ರೆ ಇಂದು ಕಲಬುರಗಿ ಜಿಲ್ಲೆಯ ಜೇವರ್ಗಿ ತಲುಪಿದ್ದು, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ದೇವಸ್ಥಾನಕ್ಕೆ ಹೋಗುವುದು ನನಗೆ ಇಷ್ಟ. ದಾರಿಯ ಮಧ್ಯೆ ಸಿಗುವ ದೇವಸ್ಥಾನ ಮತ್ತು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುತ್ತೇನೆ. ಇದರಿಂದ ನನಗೆ ಸಂತೋಷವಾಗುತ್ತದೆ ಮತ್ತು ಇದು ಮುಂದುವರೆಯಲಿದೆ ಎಂದಿದ್ದಾರೆ.