ರಾಹುಲ್ ಗಾಂಧಿ ಪ್ರಚಾರ ಮಾಡಿದ ಕಡೆ ಕಾಂಗ್ರೆಸ್ ಸೋತಿದೆ, ಬಿಜೆಪಿ ಗೆದ್ದಿದೆ: ಪ್ರಕಾಶ್ ಜಾವಡೆಕರ್

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಚುನಾವಣಾ ಪ್ರಚಾರ ಮಾಡಿದ ರಾಜ್ಯಗಳೆಲ್ಲಲ್ಲ ಕಾಂಗ್ರೆಸ್ ಸೋತಿದೆ ಮತ್ತು ಬಿಜೆಪಿ ಗೆದ್ದಿದೆ...
ಪ್ರಕಾಶ್ ಜಾವಡೆಕರ್
ಪ್ರಕಾಶ್ ಜಾವಡೆಕರ್
Updated on
ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಚುನಾವಣಾ ಪ್ರಚಾರ ಮಾಡಿದ ರಾಜ್ಯಗಳೆಲ್ಲಲ್ಲ ಕಾಂಗ್ರೆಸ್ ಸೋತಿದೆ ಮತ್ತು ಬಿಜೆಪಿ ಗೆದ್ದಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೆಕರ್ ಅವರು ಸೋಮವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಾವಡೆಕರ್ ಅವರು, ರಾಜ್ಯದಲ್ಲಿ ರಾಹುಲ್ ಗಾಂಧಿ ಚುನಾವಣೆ ಮಾಡುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ. ಏಕೆಂದರೆ ಅವರು ಪ್ರಚಾರದ ಮಾಡಿದ ಕಡೆ ಕಾಂಗ್ರೆಸ್ ಸೋತಿದೆ ಮತ್ತು ಬಿಜೆಪಿ ಗೆದ್ದಿದೆ ಎಂದರು.
ರಾಹುಲ್ ದೇವಸ್ಥಾನ ಭೇಟಿ ಕೇವಲ ವೋಟ್ ಗಿಮಿಕ್ ಮಾತ್ರ. ಗುಜರಾತ್ ಮತ್ತು ಕರ್ನಾಟಕದಲ್ಲಿ ಮಾತ್ರ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ದೆಹಲಿಯಲ್ಲಿ ಒಂದು ದಿನವಾದರೂ ಅವರು ದೇವಸ್ಥಾನಕ್ಕೆ ಹೋಗಿದ್ದಾರಾ? ಎಂದ ಕೇಂದ್ರ ಸಚಿವರು ಪ್ರಶ್ನಿಸಿದರು.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಜಾವಡೆಕರ್ ಅವರು, ಸಿದ್ದರಾಮಯ್ಯ ಅವರಿಂದ ಪ್ರಧಾನಿ ಮೋದಿ ಕಲಿಯೋದು ಏನಿದೆ? ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರನ್ನು ಗಾರ್ಬೆಜ್ ಸಿಟಿ ಮಾಡಿದ್ದು ಸಿದ್ದರಾಮಯ್ಯ. ಅಲ್ಲದೇ ಕೆರೆಗಳನ್ನು ಹಾಳು ಮಾಡಿದ್ದು ಅವರೇ. ಸೇಫ್ ಸಿಟಿಯಾಗಿದ್ದ ಬೆಂಗಳೂರನ್ನು ಕ್ರೈಂ ಸಿಟಿ ಮಾಡಿದ್ದು ಸಹ ಸಿದ್ದರಾಮಯ್ಯ ಎಂದು ಕಿಡಿಕಾರಿದರು.
ಕ್ರೈಂ ರೇಟಿಂಗ್ ನಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಇದನ್ನು ಪ್ರಧಾನಿ ಮೋದಿ ಕಲಿಯಬೇಕಾ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಕೊಲೆ ರಾಜಕಾರಣವನ್ನು ಏಕೆ ಮಾಡುತ್ತಿದೆ? ರಾಜ್ಯದಲ್ಲಿ ಇದುವರೆಗೂ ಎಂಎಂ ಕಲ್ಬುರ್ಗಿ, ಗೌರಿ ಹತ್ಯೆ ಸೇರಿ 25 ಕೊಲೆಗಳಾಗಿವೆ. ಸಂತೋಷ್ ಕೊಲೆಯಲ್ಲಿ ಗೃಹ ಸಚಿವ ರಾಮಲಿಂಗ ರೆಡ್ಡಿ ನಾಚಿಕೆ ಬಿಟ್ಟು ಹೇಳಿಕೆ ನೀಡಿದ್ದಾರೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com