ವಿಧಾನಸಭೆ ಉಪಾಧ್ಯಕ್ಷರಾಗಿ ಚಿಂತಾಮಣಿ ಶಾಸಕ ಕೃಷ್ಣಾರೆಡ್ಡಿ ಆಯ್ಕೆ

ವಿಧಾನ ಸಭೆ ಉಪಾಧ್ಯಕ್ಷ (ಡೆಪ್ಯುಟಿ ಸ್ಪೀಕರ್) ಆಗಿ ಚಿಂತಾಮಣಿ ಶಾಸಕರಾದ ಎಂ. ಕೃಷ್ಣಾರೆಡ್ಡಿ ಆಯ್ಕೆಯಾಗಿದ್ದಾರೆ.
ಎಂ. ಕೃಷ್ಣಾರೆಡ್ಡಿ
ಎಂ. ಕೃಷ್ಣಾರೆಡ್ಡಿ
Updated on
ಬೆಂಗಳೂರು: ವಿಧಾನ ಸಭೆ ಉಪಾಧ್ಯಕ್ಷ (ಡೆಪ್ಯುಟಿ ಸ್ಪೀಕರ್) ಆಗಿ ಚಿಂತಾಮಣಿ ಶಾಸಕರಾದ ಎಂ. ಕೃಷ್ಣಾರೆಡ್ಡಿ ಆಯ್ಕೆಯಾಗಿದ್ದಾರೆ.
ಜೆಡಿಎಸ್‌ನ ಕೃಷ್ಣಾರೆಡ್ಡಿ  2 ಬಾರಿ ಚಿಂತಾಮಣಿ ಶಾಸಕರಾಗಿ ಆಯ್ಕೆಯಾಗಿದ್ದು ಜೆಡಿಎಸ್‌ ಶಾಸಕ ಗೋಪಾಲಯ್ಯ  ಇವರ ಪರವಾಗಿ ಪ್ರಸ್ತಾವನೆ ಸಲ್ಲಿಸಿದ್ದರು.
ಶುಕ್ರವಾರ ಬೆಳಗ್ಗೆ ವಿಧಾನಸಭೆ ಕಲಾಪ  ಪ್ರಾರಂಭವಾದಾಗ ಸಭಾಧ್ಯಕ್ಷ ರಮೇಶ್‌ಕುಮಾರ್ ಉಪಸಭಾಧ್ಯಕ್ಷರ ಚುನಾವಣೆ ನಡೆಸಲು ಸೂಚಿಸಿದ್ದಾರೆ. ಈ ವೇಳೆ ಉಪಾಧ್ಯಕ್ಷ ಸ್ಥಾನಕ್ಕೆ ಕೃಷ್ಣಾರೆಡ್ಡಿ  ಅವರ ಹೆಸರನ್ನು ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಸೂಚಿಸಿದ್ದಾರೆ. ಇದನ್ನು ಗೋಪಾಲಯ್ಯ  ಅನುಮೋದಿಸಿದ್ದಾರೆ. ಇದಕ್ಕೆ ಬೇರಾರೂ ವಿರೋಧ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ರಮೇಶ್ ಕುಮಾರ್ ಕೃಷ್ಣಾರೆಡ್ಡಿ  ಆಯ್ಕೆಯನ್ನು ಘೋಷಿಸಿದ್ದಾರೆ.
ಸಭಾನಾಯಕರು, ಮುಖ್ಯಮಂತ್ರಿ, ಕುಮಾರಸ್ವಾಮಿಹಾಗೂ ವಿರೋಧ ಪಕ್ಷದ ನಾಯಕರಾದ ಯಡಿಯೂರಪ್ಪ ಕೃಷ್ಣಾರೆಡ್ಡಿಯವರನ್ನು ಉಪಾಧ್ಯಕ್ಷರ ಆಸನದ ಬಳಿ ಕರೆದು ತಂದರು.
ಅವಿರೋಧವಾಗಿ ಆಯ್ಕೆಯಾಗಿರುವ ಕೃಷ್ಣಾರೆಡ್ಡಿಯವರಿಗೆ ಕುಮಾರಸ್ವಾಮಿ, ಯಡಿಯೂರಪ್ಪ ಸೇರಿ ಹಲವು ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com