ಇದೇ ವೇಳೆ ಮಾಜಿ ಸಿಎಂ ಧರಂ ಸಿಂಗ್ ಅವರ ಬಗ್ಗೆಯೂ ಯಡಿಯೂರಪ್ಪ ಮಾತನಾಡಿದ್ದು, ಧರಂ ಸಿಂಗ್ ಸಾವಿಗೆ ನೀವೇ ಕಾರಣ, ಮುಖ್ಯಮಂತ್ರಿಯಾಗುವುದಕ್ಕಾಗಿ ನೀವು ಕಾಂಗ್ರೆಸ್ ಗೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದ್ದಿರಿ, ಅಧಿಕಾರ ಕಳೆದುಕೊಂದ ನೋವಿನಲ್ಲೇ ಧರಂ ಸಿಂಗ್ ಸಾವನ್ನಪ್ಪಿದರು, ನಂತರ ಬಿಜೆಪಿ-ಜೆಡಿಎಸ್ ಸರ್ಕಾರದಲ್ಲಿ ಎಲ್ಲಾ ನೋವುಗಳನ್ನು ಸಹಿಸಿಕೊಂಡು ನಾನು ಹಣಕಾಸು ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದೆ. ನೀವು ಸಿಎಂ ಆಗಿ ಅಧಿಕಾರ ನಡೆಸಲು ಬಿಜೆಪಿ ಹಾಗೂ ಬಿಎಸ್ ವೈ ಕಾರಣ. ಆದರೆ 20 ತಿಂಗಳ ನಂತರ ಅಧಿಕಾರ ಹಸ್ತಾಂತರ ಮಾಡುವುದರಲ್ಲಿ ಗೊಂದಲ ಉಂಟು ಮಾಡಿ ನಂಬಿಕೆ ದ್ರೋಹ ಮಾಡಿದ್ದಿರಿ, ನಂಬಿಕೆ ದ್ರೋಹ ಮಾಡುವುದು ನಿಮಗೆ ರಕ್ತಗತವಾಗಿದೆ ಎಂದು ಹೇಳಿದ್ದಾರೆ.