ನನಗೆ ನೋವಾದಾಗ ತುಂಬಾ ಭಾವುಕನಾಗುತ್ತೇನೆ: ಸಿಎಂ ಕುಮಾರ ಸ್ವಾಮಿ

ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಾನು ಕಠಿಣನಾಗಿರುತ್ತೇನೆ ಹಾಗೆಯೇ ನೋವಾದಾಗ ತುಂಬಾ ಭಾವುಕನಾಗುತ್ತೇನೆ ಎಂದು ಸಿಎಂ ಎಚ್.ಡಿ ...
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ
ಬೆಂಗಳೂರು: ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಾನು ಕಠಿಣನಾಗಿರುತ್ತೇನೆ ಹಾಗೆಯೇ ನೋವಾದಾಗ ತುಂಬಾ ಭಾವುಕನಾಗುತ್ತೇನೆ ಎಂದು ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಸಿಎಂ, ಇದು ನನ್ನ ಸ್ವಾಭಾವಿಕ ವರ್ತನೆ, ಜನರ ಮುಂದೆ ಬಹಿರಂಗವಾಗಿ ನನ್ನ ನೋವನ್ನು ತೋಡಿಕೊಳ್ಳುತ್ತೇನೆ, ನನಗೆ  ಅದೊಂದು ನೈಸರ್ಗಿಕ ಕ್ರಿಯೆ, ಅದಕ್ಕೆ ಯಾವುದೇ ಬಣ್ಣ ಇರುವುದಿಲ್ಲ, ನನ್ನ ನಡವಳಿಕೆಯಂತೆ ನನ್ನ ಕಣ್ಣೀರು ಕೂಡ ಪಾರದರ್ಶಕವಾಗಿರುತ್ತದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಕಾರ್ಯಕ್ರಮದಲ್ಲಿ ಮಾತನಾಡುವಾದಗ ಕುಮಾರ ಸ್ವಾಮಿ ಭಾವುಕರಾಗಿ ಕಣ್ಣೀರು ಹಾಕಿದ್ದರು, ನನ್ನ ನೋವನ್ನು ಜನರ ಜೊತೆ ಹಂಚಿಕೊಂಡಿದ್ದೇನೆ, ನನ್ನ ಕಣ್ಣೀರು ಸತ್ಯವಾದದ್ದು, ಇದಕ್ಕೆ ವಿಭಿನ್ನ ಅರ್ಥಕೊಡುವ ಅಗತ್ಯವಿಲ್ಲ ಎಂದು ಕುಮಾರ ಸ್ವಾಮಿ ತಿಳಿಸಿದ್ದಾರೆ.
ಮುಖ್ಯಮಂತ್ರಿಯಾಗಿ ನಾನು ರೈತರ ಸಾಲ ಮನ್ನಾ ಮಾಡಲು ತುಂಬಾ ಶ್ರಮಿಸುತ್ತಿದ್ದೇನೆ, ನಾನು ಪ್ರಯತ್ನ ಪಡುತ್ತಿದ್ದರೂ ಜನ ನನ್ನನ್ನು ಪ್ರೋತ್ಸಾಹಿಸುತ್ತಿಲ್ಲ,ಹೀಗಾಗಿ ನಾನು ನೋವು ವ್ಯಕ್ತ ಪಡಿಸಿದೆ ಎಂದು ತಿಳಿಸಿದ್ದಾರೆ.
ಸದ್ಯ ದೆಹಲಿಯಲ್ಲಿರುವ ಸಿಎಂ ಕುಮಾರ ಸ್ವಾಮಿ ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದಾರೆ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಹಾಗೂ  ರಾಜ್ಯದ ಹಲವು ಸಂಸದರನ್ನು ಸಿಎಂ ಭೇಟಿಯಾಗಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com