ಇನ್ನು ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ,ರೈತರ ಸಾಲ ಮನ್ನಾ ಮಾಡಲು ಬಳಸುವುದಾಗಿ ತಿಳಿಸಿದ್ದಾರೆ, ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆ ಹಣ ನ್ಯಾಯಯುತಕವಾಗಿ ಬಳಕೆಯಾಗಬೇಕು, ಹೀಗಾಗಿ ನಾನು ಖಾಸಗಿ ವಿಮಾನಗಳಲ್ಲಿ ಪ್ರಯಾಣಿಸಲು ಜನರ ಹಣವನ್ನು ದುರುಪಯೋಗ ಪಡಿಸಿಕೊಳ್ಳುವುದಿಲ್ಲ, ಸರ್ಕಾರಿ ಕಾರುಗಳನ್ನು ನಾನು ಬಳಸುವಾಗ ನನ್ನದೇ ಹಣದಿಂದ ಇಂಧನ ತುಂಬಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ತೆರಿಗೆಯ ಪ್ರತಿಯೊಂದು ಪೈಸೆ ಪರಿಣಾಮಕಾರಿಯಾಗಿ ಬಳಕೆಯಾಗಬೇಕು, ಸರ್ಕಾರದ ಆರ್ಥಿಕತೆಗೆ .ಯಾವುದೇ ತೊಂದರೆಯಾಗದಂತೆ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದಾರೆ..