ಸಂಪುಟದಲ್ಲಿ ಸ್ಥಾನ ಸಿಗದಿದ್ದಕ್ಕೆ ಪಕ್ಷೇತರ ಶಾಸಕ ನಾಗೇಶ್ ಆಕ್ರೋಶ; ತುಮಕೂರಿಗೆ ಬಂಪರ್

ರಾಣೆ ಬೆನ್ನೂರು ಶಾಸಕ ಆರ್. ಶಂಕರ್ ಗೆ ಸಚಿವ ಸ್ಥಾನ ಸಿಗುತ್ತದೆ ಎಂದಾದರೇ ನನಗೆ ಏಕಿಲ್ಲ, ಎಂದು ಮುಳಬಾಗಿಲು ಶಾಸಕ ನಾಗೇಂದ್ರ ...
ಡಿ.ಕೆ ಸಹೋದರರೊಂದಿಗೆ ಶಾಸಕ ಎಚ್, ನಾಗೇಶ್
ಡಿ.ಕೆ ಸಹೋದರರೊಂದಿಗೆ ಶಾಸಕ ಎಚ್, ನಾಗೇಶ್
ಕೋಲಾರ/ಬೆಂಗಳೂರು: ರಾಣೆ ಬೆನ್ನೂರು ಶಾಸಕ ಆರ್. ಶಂಕರ್ ಗೆ ಸಚಿವ ಸ್ಥಾನ ಸಿಗುತ್ತದೆ ಎಂದಾದರೇ ನನಗೆ ಏಕಿಲ್ಲ, ಎಂದು ಮುಳಬಾಗಿಲು ಶಾಸಕ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ದನಾಗಿದ್ದೆ, ಆದರೆ ನಂತರ ತಿಳಿಯಿತು ಸಚಿವರ ಪಟ್ಟಿಯಲ್ಲಿ ನನ್ನ ಹೆಸರಿಲ್ಲ ಎಂದು, ಇದರಿಂದ ನನಗೆ ತುಂಬಾ ಬೇಸರವಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ನಾನು ಗೆದ್ದ ನಂತರ ಡಿ.ಕೆ ಶಿವಕುಮಾರ್ ಮುಳಬಾಗಿಲಿಗೆ ಬಂದು ನನ್ನನ್ನು ಬೆಂಗಳೂರಿಗೆ ಕರೆ ತಂದರು, ಕಾಂಗ್ರೆಸ್ ನಾಯಕರು ನನಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು ಎಂದು ಹೇಳಿದ್ದಾರೆ. ಕ್ಷೇತ್ರಕ್ಕೆ ತೆರಳಿ ಕಾರ್ಯಕರ್ತರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ತುಮಕೂರಿಗೆ ಬಂಪರ್
ಸಚಿವ ಸಂಪುಟ ವಿಸ್ತರಣೆಯಲ್ಲಿ ತುಮಕೂರು ಜಿಲ್ಲೆಗೆ ಬಂಪರ್ ಸಿಕ್ಕಿದೆ. ಕೊರಟಗೆರೆ ಶಾಸಕ ಪರಮೇಶ್ವರ್ ಉಪ ಮುಖ್ಯಮಂತ್ರಿಯಾಗಿದ್ದಾರೆ. ಜೊತೆಗೆ ತುಮಕೂರು ಜಿಲ್ಲೆಯ ಕಾಂಗ್ರೆಸ್ ನ ವೆಂಕಟರಮಣಪ್ಪ ಮತ್ತು ಜೆಡಿಎಸ್ ನ ಗುಬ್ಬಿ ಶ್ರೀನಿವಾಸ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಳೆದ ಎರಡು ಮೂರು ದಶಕಗಳಿಂದ ತುಮಕೂರಿಗೆ ಎರಡು ಸ್ಥಾನ ಸಿಗುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com